10th Standard Hakki Harutide Nodidira Kannada Notes Question Answer Guide Summery Extract Mcq Pdf Download in Kannada Medium Karnataka State Syllabus 2025 ಹಕ್ಕಿ ಹಾರುತಿದೆ ನೋಡಿದಿರಾ question answer Hakki harutide nodidira poem summary in kannada 10th kannada hakki harutide nodidira notes kseeb solutions for class 10 kannada poem 2 notes ಹಕ್ಕಿ ಹಾರುತಿದೆ ನೋಡಿದಿರಾ notes hakki harutide nodidira kannada notes 10th standard sslc hakki harutide nodidira lyrics in kannada 10th kannada poem hakki harutide nodidira 10ನೇ ತರಗತಿ ಕನ್ನಡ ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಪ್ರಶ್ನೆ ಉತ್ತರ ನೋಟ್ಸ್ 10th Class Kannada 2nd Poem Notes in Kannada hakki harutide nodidira kannada notes.

10ನೇ ತರಗತಿ ಹಕ್ಕಿ ಹಾರುತಿದೆ ನೋಡಿದಿರಾ ಕನ್ನಡ ನೋಟ್ಸ್
ಲೇಖಕರ ಪರಿಚಯ:
“ಅಂಬಿಕಾತನಯದತ್ತ ಕಾವ್ಯನಾಮದಿಂದ ಪ್ರಸಿದ್ದರಾಗಿರುವ “ದತ್ತಾತ್ರೇಯ ರಾಮಚಂದ್ರ ಬೇಂದ್ರೆ” (ಕ್ರಿ.ಶ. 1896) ಧಾರವಾಡದವರು. ಇವರು ರಲ್ಲಿ ಜನಿಸಿದರು. ‘ಪ್ರೌಢಶಾಲಾ ಅಧ್ಯಾಪಕರಾಗಿ, ಸೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಧಾರವಾಡದ ಬಾನುಲಿ ಕೇಂದ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ “ದ.ರಾ.ಬೇಂದ್ರೆ” ಅವರು ಗರಿ. ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಸೂರ್ಯಪಾನ, ಗಂಗಾವತರಣ, ನಗೆಯ ಹೊಗೆ, ಸಾಹಿತ್ಯದ ವಿರಾಟ್ ಸ್ವರೂಪ, ಮೊದಲಾದ ಕೃತಿಗಳ ಕರ್ತೃ, ಮರಾಠಿ, ಇಂಗ್ಲೀಷ್ ಭಾಷೆಯೂ ಸೇರಿದಂಥೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. “ಅರಳು-ಮರಳು” ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಕುತಂತಿ ಕವನ ಸಂಕಲನಕ್ಕೆ “ಜ್ಞಾನಪೀಠ ಪ್ರಶಸ್ತಿ” ಹಾಗೂ ಭಾರತ ಸರ್ಕಾರದ ‘ಪದ್ಮಶ್ರೀ” ಪುರಸ್ಕಾರಕ್ಕೆ ಭಾಜನರಾಗಿರುವ ಬೇಂದ್ರ ಅವರು ಕ್ರಿ.ಶ. 1943ರಲ್ಲಿ ಶಿವಮೊಗ್ಗದಲ್ಲಿ ಸಮಾವೇಶಗೊಂಡ 27 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ದ.ರಾ.ಬೇಂದ್ರ ವಿರಚಿತ ‘ಗರಿ’ ಕವನಸಂಕಲನದಿಂದ ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯನ್ನು ಆಯ್ಕೆ ಮಾಡಲಾಗಿದೆ.
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ
1) ಹಕ್ಕಿ ಯಾವ ವೇಗದಲ್ಲಿ ಹಾರುತಿದೆ?
ಇರುಳು ಅಳಿದು ಬೆಳಗಾಗುವ ವೇಳೆಯೊಳಗೆ, ಕಣ್ಣು ಮುಚ್ಚಿ ಬಿಡುವ ವೇಗದಲ್ಲಿ ಹಕ್ಕಿ ಹಾರುತಿದೆ.
2) ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಹಕ್ಕಿಯ ಗರಿಯಲ್ಲಿ ಕಪ್ಪು-ಬಿಳಿ, ಬಣ್ಣ, ಕೆಂಪು-ಹಳದಿ ಬಣ್ಣಗಳಿವೆ.
3) ಹಕ್ಕಿಯ ಕಣ್ಣುಗಳು ಯಾವುವು?
ಸೂರ್ಯ-ಚಂದ್ರರೇ ಹಕ್ಕಿಯ ಕಣ್ಣುಗಳು.
4) ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಹಕ್ಕಿಯು ಖಂಡ-ಖಂಡಗಳ ನೆತ್ತಿಯನ್ನು ಕುಕ್ಕಿದೆ.
5) ಹಕ್ಕಿ ಯಾರನ್ನು ಹರಸಿದೆ?
ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹರಸಿದೆ.
6) ಹಕ್ಕಿಯು ಯಾವುದರ ಸಂಕೇತವಾಗಿದೆ?
ಹೊಸತನಕ್ಕೆ ತೆರೆದುಕೊಳ್ಳುವ ಸಂಕೇತವಾಗಿದೆ.
7) ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?
ದಿಕ್ ಮಂಡಲಗಳ ಆಚೆಗೆ ಹಕ್ಕಿಯ ಚುಂಚಗಳು ಚಾಚಿವೆ
ಆ) ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1) ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?
ನೀಲ ಮೇಘ ಮಂಡಲದ ಬಣ್ಣ, ರೆಕ್ಕೆ ಬಡಿದು ಹಾರುವ ಹಕ್ಕಿಯ ಬಣ್ಣದೊಂದಿಗೆ ಕವಿ ಹಕ್ಕಿಯ ಹಾರಾಟವನ್ನು ಹೋಲಿಸಿದ್ದಾರೆ. ಒಟ್ಟಾಗಿ ಹಾರುವ ಹಕ್ಕಿಗಳ ಸಾಲು ಮುಗಿಲ ಮಾಲೆಯಂತೆ ಕಂಗೊಳಿಸಿದರೆ, ಹಾರುವ ಹಕ್ಕಿಗಳ ಕಣ್ಣುಗಳು ಆಕಾಶದ ಸೂರ್ಯ-ಚಂದ್ರರಂತೆ ಕಂಗೊಳಿಸುತ್ತದೆ.
2) ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಕಾಲದಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕಾಲದ ಗತಿಯು ಸಾಗಿದಂತೆ ಪ್ರಕೃತಿಯ ಸಹಜ ಕ್ರಿಯೆಗಳು ಯುಗಯುಗಗಳಿಂದ ಉರುಳುತ್ತಾ ಸಾಗುವ ಪ್ರಕೃತಿಯಲ್ಲಿಯೂ ನಾವು ಪರಿವರ್ತನೆ ಹೊಸತನವನ್ನು ಕಾಣುವಂತೆ ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹರಸಿದೆ.
ಇ. ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ.
1) ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?
ನೀಲ ಮೇಘ ಮಂಡಲದ ಬಣ್ಣ, ರೆಕ್ಕೆ ಬಡಿದು ಹಾರುವ ಹಕ್ಕಿಯ ಬಣ್ಣದೊಂದಿಗೆ ಕವಿ ಹಕ್ಕಿಯ ಹಾರಾಟವನ್ನು ಹೋಲಿಸಿದ್ದಾರೆ. ಒಟ್ಟಾಗಿ ಹಾರುವ ಹಕ್ಕಿಗಳ ಸಾಲು ಮುಗಿಲ ಮಾಲೆಯಂತೆ ಕಂಗೊಳಿಸಿದರೆ, ಹಾರುವ ಹಕ್ಕಿಗಳ ಕಣ್ಣುಗಳು ಆಕಾಶದ ಸೂರ್ಯ-ಚಂದ್ರರಂತೆ ಕಂಗೊಳಿಸುತ್ತದೆ.
2) ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಕವಿಯ ಕಾಲದಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಕಾಲದ ಗತಿಯು ಸಾಗಿದಂತೆ ಪ್ರಕೃತಿಯ ಸಹಜ ಕ್ರಿಯೆಗಳು ಯುಗಯುಗಗಳಿಂದ ಉರುಳುತ್ತಾ ಸಾಗುವ ಪ್ರಕೃತಿಯಲ್ಲಿಯೂ ನಾವು ಪರಿವರ್ತನೆ ಹೊಸತನವನ್ನು ಕಾಣುವಂತೆ ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹರಸಿದೆ.
3) ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
ಹಕ್ಕಿಯು ಬೆಳ್ಳಿಯ ಹಳ್ಳಿ ಅಂದರೆ ಬೆಳ್ಳಿಮೋಡಗಳನ್ನು ಮೀರಿ ತಿಂಗಳೂರಿನ ನೀರನು ಹೀರಿ ಆಡುತ್ತಾ ಹಾಡುತ್ತಾ ಮಂಗಳಲೋಕದ ಅಂಗಳಕೇರಿ ದಿಕ್ಕು ದಿಕ್ಕುಗಳ ಆಚೆಗೂ ತನ್ನ ಕೊಕ್ಕನ್ನು ಚಾಚಿ ಹಾರುತ್ತಿದೆ ಎಂದು ಕವಿ ಹೇಳಿದ್ದಾರೆ.
ಇ. ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ :
1) ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು?
ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿದ ಮಾತುಗಳೆಂದರೆ –
ಚಲನಶೀಲತೆ ಜೀವಂತಿಕೆಯ ಗುಣವಾಗಿರುವುದರಿಂದ ನಿಸರ್ಗದ ಹೊಂದಾಣಿಕೆಯಂತೆ “ಚಲನಶೀಲತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ, ಎಂತಹ ಪ್ರಭಾವಶಾಲಿಯಾದರೂ ನಿಸರ್ಗದತ್ತವಾದ ಕಾಲಚಕದ ಎದುರಿನಲ್ಲಿ ತಲೆಬಾಗಲೇಬೇಕು. ಅದಕ್ಕೆ ಹೊಂದಿಕೊಳ್ಳಬೇಕು. ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯು ಕಾಲ ಉರುಳಿದಂತೆ ಇತಿಹಾಸವಾಗುತ್ತಾ ಹೋಗುತ್ತದೆ ಕವಿ ಬೇಂದ್ರೆಯವರು ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಹಕ್ಕಿಯ ಹಾರುವಿಕೆ ಪ್ರಕೃತಿಯ ಸಹಜ ಕಿಯೆಯೊಂದಿಗೆ ಯುಗಗಳೇ ಉರುಳಿ ಹೊಸತನಕ್ಕೆ ತೆರೆದುಕೊಳ್ಳುವ ಸಂಕೇತವಾಗಿದೆ.
ಈ) ಸಂದರ್ಭದೊಂದಿಗೆ ಸ್ವಾರಸ್ಯವನ್ನು ವಿವರಿಸಿ.
‘ರೆಕ್ಕೆಗಳೆರಡೂ ಪಕ್ಕದಲ್ಲುಂಟು’
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ದ.ರಾ.ಬೇಂದ್ರೆ’ ರವರು ರಚಿಸಿರುವ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಗರಿ’ ಕವನಸಂಕಲನದಿಂದ ಆರಿಸಲಾಗಿದೆ.
ಸಂದರ್ಭ : ಪ್ರಸ್ತುತ ಸಾಲನ್ನು ಕವಿ ಹಕ್ಕಿಯ ಸೌಂದರ್ಯವನ್ನು ಅದರ ಆಕಾರವನ್ನು ವರ್ಣಿಸುತ್ತಾ ಈ ಸಾಲುಗಳನ್ನು ಬರೆದಿದ್ದಾರೆ.
ಭಾವಾರ್ಥ : ಹಕ್ಕಿಯ ರೆಕ್ಕೆಗಳನ್ನು ವರ್ಣಿಸುತ್ತಾ ಹಕ್ಕಿಗಳಿಗೆ ತನ್ನ ದೇಹದ ಎರಡು ಪಕ್ಕಗಳಲ್ಲಿ ಬಣ್ಣ ಬಣ್ಣದ ರೆಕ್ಕೆ ಇರುವುದನ್ನು ಅದು ಅದರ ಸೌಂದರ್ಯಕ್ಕೆ ಮಾತ್ರವಲ್ಲದೇ ಅದರ ದೇಹದ ಪ್ರಮುಖ ಅಂಗವಾಗಿದೆ. ಹಕ್ಕಿಗೆ ತನ್ನ ದೇಹದ ಎರಡು ಪಕ್ಕದಲ್ಲಿ ರೆಕ್ಕೆಗಳಿದ್ದು ಅವು ಅದರ ಅಂದವನ್ನು ಹೆಚ್ಚಿಸುತ್ತಾ ಮೇಲೆ ಮೇಲೆ ಹಾರಲು ಸಹಾಯಕವಾಗಿದೆ.
ವಿಶೇಷತೆ : ಹಕ್ಕಿಯ ದೇಹದ ಸೌಂದರ್ಯ, ಅದರಲ್ಲಿಯೂ ರೆಕ್ಕೆಗಳಿಗೆ ಸಾಕಷ್ಟು ಮಾಹಿತಿ ಇದೆ. ಸರಳ, ಸಹಜ, ಸುಂದರ ಭಾಷೆಯಲ್ಲಿ ಇದನ್ನು ವ್ಯಕ್ತಪಡಿಸಲಾಗಿದೆ.
2. ‘ಸಾರ್ವಭೌಮರಾ ನೆತ್ತಿಯ ಕುಕ್ಕಿ’
ಪ್ರಸ್ತಾವನೆ: ಪ್ರಸ್ತುತ ಈ ಸಾಲನ್ನು ‘ದ.ರಾ.ಬೇಂದ್ರೆ’ ಯವರು ರಚಿಸಿರುವ “ಹಕ್ಕಿ ಹಾರುತಿದೆ ನೋಡಿದಿರಾ” ಎಂಬ ಕವನದಿಂದ ಆರಿಸಲಾಗಿದೆ. ಈ ಕವನವನ್ನು “ಗರಿ” ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಹಕ್ಕಿ ಹಾರುತ್ತಿರುವಾಗ, ಅದರ ಕೆಳಗಿರುವ ನಾವೆಲ್ಲಾ ಚಿಕ್ಕವರೇ, ರಾಜಮಹಾರಾಜರು ನೆಲದ ಮೇಲೆ ರಾಜ್ಯವಾಳಿದ ಇತಿಹಾಸ ನಮಗಿದ್ದರು, ಅವರ ನೆತ್ತಿಯ ಮೇಲೆ ಹಾರುವ ಹಕ್ಕಿಗಳು ಅವರೆಲ್ಲರಕ್ಕಿಂತ ಎತ್ತರದಲ್ಲಿ ಹಾರುವ ವೃತ್ತಿ ಸಾರ್ವಭೌಮರು ಎಂದು ಮೆರೆದವರ ನೆತ್ತಿಯ ಮೇಲೆ ಇವೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.
ವಿವರಣೆ: ಕಾಲಚಕ್ರಕ್ಕೆ ಎಲ್ಲರೂ ತಲೆಬಾಗಲೇಬೇಕು, ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತಾ ಹೋಗುತ್ತದೆ.
ವಿಶೇಷತೆ: ಸರಳ ಭಾಷೆಯಲ್ಲಿ ಜೀವನದ ಸತ್ಯವನ್ನು ತಿಳಿಸಿಕೊಡಲಾಗಿದೆ.
3. ‘ಬಲ್ಲರು ಯಾರಾ ಹಾಕಿದ ಹೊಂಚ’
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ದ.ರಾ.ಬೇಂದ್ರೆ’ ರವರು ರಚಿಸಿರುವ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಗರಿ’ ಕವನಸಂಕಲನದಿಂದ ಆರಿಸಲಾಗಿದೆ.
ಸಂದರ್ಭ : ಹಕ್ಕಿಗಳ ಸಾಧನೆಯ ಬಗ್ಗೆ ತಿಳಿಸುತ್ತಾ ಕವಿ ಈ ವಾಕ್ಯವನ್ನು ಹೇಳುತ್ತಿದ್ದಾರೆ.
ಭಾವಾರ್ಥ : ಹಕ್ಕಿಯು ಮುಗಿಲಾಚೆಗೆ, ದಿಗ್ಮಂಡಲಗಳವರೆಗೆ ಬ್ರಹ್ಮಾಂಡಗಳನ್ನು ತನ್ನ ರೆಕ್ಕೆ ಚಾಚಿ ಏನೋ ಹೊಂಚು ಹಾಕಿರಬಹುದು. ಯಾರು ಬಲ್ಲರು? ಎಂಬುದಾಗಿ ಕವಿ ಆಶ್ಚರ್ಯದಿಂದ ಪ್ರಶ್ನಿಸುತ್ತಿದ್ದಾರೆ.
ವಿಶೇಷತೆ : ಹಕ್ಕಿಯ ಚಲನೆಯ ವಿಶೇಷತೆಗಳನ್ನು ಕವಿ ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಭಾಷೆ ಸರಳತೆಯಿಂದ ಕೂಡಿದ್ದರೂ ಅರ್ಥಗರ್ಭಿತವಾಗಿದೆ.
4. ‘ಹೊಸಗಾಲದ ಹಸುಮಕ್ಕಳ ಹರಸಿ’
ಪ್ರಸ್ತಾವನೆ: ಪ್ರಸ್ತುತ ಈ ಸಾಲನ್ನು ‘ದ.ರಾ.ಬೇಂದ್ರೆ’ ಯವರು ರಚಿಸಿರುವ “ಹಕ್ಕಿ ಹಾರುತಿದೆ ನೋಡಿದಿರಾ” ಎಂಬ ಕವನದಿಂದ ಆರಿಸಲಾಗಿದೆ. ಈ ಕವನವನ್ನು “ಗರಿ” ಕವನ ಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಕಾಲ ಉರುಳಿದಂತೆ ಪ್ರತಿಯೊಂದು ಘಟನೆಯು ಇತಿಹಾಸವಾಗಿ, ಹೊಸತನಕ್ಕೆ ನಾಂದಿಯಾಗುತ್ತದೆ. ಆ ಹೊಸತನ ಹೊಸಕಾಲದ ಚಿಕ್ಕ ಮಕ್ಕಳಲ್ಲಿ ಮೂಡಿ ಬರಲಿ ಎಂದು ಹರಸುತ್ತಾ ಕವಿ ಹೀಗೆ ಹೇಳುತ್ತಾರೆ.
ವಿವರಣೆ: ಹೊಸ ಯುಗಕ್ಕೆ ಕಾಲಿಡುವ ಮಕ್ಕಳಿಗೆ ಪ್ರಕೃತಿಯ ಜೀವನದಲ್ಲಿ ಹೊಸತನ್ನು ಪಡೆಯಲಿ ಎಂದು ಪ್ರಕೃತಿ ಹರಸುತ್ತಿದ್ದಾಳೆ.
ವಿಶೇಷತೆ: ಪ್ರಕೃತಿಯ ಸಹಜ ಕ್ರಿಯೆಯೊಂದಿಗೆ ಯುಗಗಳೇ ಉರುಳಿ ಹೊಸತನಕ್ಕೆ ತೆರೆದುಕೊಳ್ಳುವ ಸಂಕೇತವೂ ಆಗಿದೆ. ಸರಳ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ.
5. ‘ಮಂಗಳ ಲೋಕದ ಅಂಗಳಕೇರಿ’
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ದ.ರಾ.ಬೇಂದ್ರೆ’ ರವರು ರಚಿಸಿರುವ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ ಆರಿಸಲಾಗಿದೆ. ಇದನ್ನು ‘ಗರಿ’ ಕವನಸಂಕಲನದಿಂದ ಆರಿಸಲಾಗಿದೆ.
ಸಂದರ್ಭ : ಹಕ್ಕಿಗಳ ಬೆಳ್ಳಿ ಹಳ್ಳಿಯ ಮೇಲೇರಿ ಆಡುತ್ತಾ ಹಾಡುತ್ತಾ ಮೇಲೇರಿ ಹೋಗುವ ಚಂದದ ಬಗ್ಗೆ ಹೇಳುತ್ತಾ ಈ ವಾಕ್ಯವನ್ನು ವರ್ಣಿಸಿದ್ದಾರೆ.
ಭಾವಾರ್ಥ : ಮುಗಿಲೆತ್ತರಕ್ಕೆ ಬಾನಿನಂಗಳದಲ್ಲಿ ಹಾರುವ ಹಕ್ಕಿಯನ್ನು ಕಂಡು ಬಹುಶಃ ಮಂಗಳ ಲೋಕದ ಅಂಗಳದವರೆಗೂ ಹಾರಬಹುದೆಂಬ ಭಾವನೆ ಉಂಟಾಗುತ್ತದೆ. ಮೇಲೆ ಹಾರುವ ಅದರ ಅಂದ-ಚೆಂದ ನೋಡಲು ಬಲುಚೆಂದ ಎಂಬುದಾಗಿ ವರ್ಣಿಸಿದ್ದಾರೆ.
ವಿಶೇಷತೆ : ಹಕ್ಕಿಯ ಹಾರುವಿಕೆ ಬಗ್ಗೆ ಕವಿ ತನ್ನ ಕಲ್ಪನೆಯ ಸೌಂದರ್ಯವನ್ನು ಸರಳ, ಸಹಜ ರೀತಿಯಲ್ಲಿ ಬಿಚ್ಚಿಟ್ಟಿದ್ದಾರೆ.
ಉ) ಹೊಂದಿಸಿ ಬರೆಯಿರಿ : (ಸರಿಉತ್ತರ)
ಹಕ್ಕಿ | ಪಕ್ಷಿ |
ನಾಕುತಂತಿ | ಜ್ಞಾನಪೀಠ ಪ್ರಶಸ್ತಿ |
ನೀಲಮೇಘಮಂಡಲ | ಸಮಬಣ್ಣ |
ರಾಜ್ಯದ ಸಾಮ್ರಾಜ್ಯದ | ತೆನೆ ಒಕ್ಕಿ |
ತೇಲಿಸಿ ಮುಳುಗಿಸಿ | ಖಂಡ-ಖಂಡಗಳ |
ಮಂಗಳ | ಅಂಗಳಕೇರಿ |
ಭಾಷಾ ಚಟುವಟಿಕೆ
1) ನೀಡಿರುವ ಪದಗಳ ಸಮಾನಾರ್ಥಕ ಪದ ಬರೆಯಿರಿ:
1) ಸೂರ್ಯ = ಭಾನು, ಭಾಸ್ಕರ, ರವಿ
2) ಎದೆ = ಹೃದಯ
3) ಮೇಘ = ಮುಗಿಲು, ಮೋಡ
4) ಗಡ = ಸಣ್ಣದಾದ ಕೋಟೆ
5) ಹರಸು = ಆಶಿರ್ವಾದ
6) ಒಕ್ಕಿ = ತೆನೆಯಿಂದ ಕಸಕಡ್ಡಿ ಬೇರ್ಪಡಿಸು
7) ಕೆನ್ನ = ಕೆಂಪು
2) ತತ್ಸಮ – ತದ್ಭವ ಬರೆಯಿರಿ.
1). ಗಡ – ಸಣ್ಣದಾದ ಕೋಟೆ
2) ಹರಸು – ಆಶಿರ್ವಾದ
3) ಚಂದ್ರ – ತೆನೆಯಿಂದ ಕಸಕಡ್ಡಿ ಬೇರ್ಪಡಿಸು
4) ಯುಗ – ಕೆಂಪು
5) ಅಂಗಳ – ಅಂಗಣ
3) ಸಂಧಿ ವಿಂಗಡಿಸಿ ಹೆಸರಿಸಿ :
ಇರುಳಳಿದು, ತೆರೆದಿಕ್ಕುವ, ಹೊಸಗಾಲ
- ಇರುಳಳಿದು = ಇರುಳು +ಅಳಿದು = ಲೋಪಸಂಧಿ
- ತೆರೆದಿಕ್ಕುವ = ತೆರೆದು + ಇಕ್ಕುವ = ಲೋಪಸಂಧಿ
- ಹೊಸಗಾಲ = ಹೊಸ + ಕಾಲ = ಆದೇಶಸಂಧಿ
- ದಿಗ್ಮಂಡಲ = ದಿಗ್ + ಮಂಡಲ = ಜಶ್ವ ಸಂಧಿ
- ತಿಂಗಳಿನೂರು = ತಿಂಗಳಿನ + ಊರು = ಗುಣಸಂಧಿ
4) ಈ ಪದ್ಯದಲ್ಲಿ ಬರುವ ದ್ವಿರುಕ್ತಿ ಪದಗಳನ್ನು ಪಟ್ಟಿ ಮಾಡಿ.
- ದಿನ ದಿನ
- ಗಾವುದ ಗಾವುದ
- ಬಣ್ಣ – ಬಣ್ಣ
- ಖಂಡ – ಖಂಡ
- ಯುಗ – ಯುಗಗಳ
ಆ. ಕೊಟ್ಟಿರುವ ಅವ್ಯಯ ಪದಗಳೂ ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.
ಸಮಾನ್ಯಾರ್ಥ ಕಾವ್ಯಯ | ಅನುಕರಣ ವ್ಯಯಗಳು | ಭಾವಸೂಚಕಾ ವ್ಯಯಗಳು | ಕ್ರಿಯಾರ್ಥ ಕಾವ್ಯಾಯಗಳು | ಸಂಬಂಧಾರ್ಥ ಕಾವ್ಯಾಯಗಳು | ಅವಧಾರಣಾರ್ಥ ಕಾವ್ಯಾಯಗಳು |
---|---|---|---|---|---|
1. ಬೇಗನೆ | ಧಗಧಗ | ಅಯ್ಯೋ | ಸಾಕು | ಅದ್ದರಿಂದ | ಅದುವೇ |
2. ಮೆಲ್ಲಗೆ | ಕೊಯ್ಯನೇ | ಓಹೋ | ಹೌದು | ಅಲ್ಲದೆ | ನೀನೇ |
ಚಟುವಟಿಕೆ
1. ನೀಲಮೇಘಮಂಡಲ – ಸಮಬಣ್ಣ ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ ಹಕ್ಕಿ ಹಾರುತಿದೆ ನೋಡಿದಿರಾ?
2. ಯುಗ-ಯುಗಗಳ ಹಣೆ ಬರೆಹದ ಒರಸಿ ಮನ್ವಂತರಗಳ ಭಾಗ್ಯವ ತೆರೆಸಿ ರೆಕ್ಕೆಯ ಬೀಸುತ ಚೇತನಗೊಳಿಸಿ ಹೊಸಗಾಲದ ಹಸುಮಕ್ಕಳ ಹರಸಿ ಹಕ್ಕಿ ಹಾರುತಿದೆ ನೋಡಿದಿರಾ?
ಹೆಚ್ಚಿನ ಅಭ್ಯಾಸಕ್ಕಾಗಿ
1) ಕೆಳಗಿನ ಉತ್ತರಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಬರೆಯಿರಿ:
1) ‘ಹಕ್ಕಿ ಹಾರುತಿದೆ ನೋಡಿದಿರಾ’ ಪದ್ಯಭಾಗವನ್ನು _________ ದಿಂದ ಆರಿಸಲಾಗಿದೆ.
ಅ) ಗರಿ
ಆ) ನಾದಲೀಲೆ
ಇ) ಮೇಘದೂತ
ಈ) ಉಯ್ಯಾಲೆ
2) ಗಾವುದ ಎಂದರೆ________ ಗಳ ಅಂತರ
ಅ) 10 ಮೈಲಿ
ಆ) 11 ಮೈಲಿ
ಇ) 12 ಮೈಲಿ
ಈ) 13 ಮೈಲಿ
3) ಹಕ್ಕಿಯ ಕಣ್ಣುಗಳ ಹೋಲಿಕೆ________ಗಳಂತೆ
ಅ) ಗಿಡ-ಮರ
ಆ) ದೀಪದಂತೆ
ಇ) ತಾರೆಗಳಂತೆ
ಈ) ಸೂರ್ಯ- ಚಂದ್ರ
4) ________ಗಳ ಭಾಗ್ಯವ ತೆರೆಸಿ,
ಅ) ಯುಗ-ಯುಗ
ಆ) ಮನ್ವಂತರಗಳ
ಇ) ಖಂಡ-ಖಂಡಗಳ
ಈ) ಮಂಡಲ-ಗಿಂಡಲ
5) ಸಾರ್ವಭೌಮರ ನೆತ್ತಿಯ________
ಅ) ಒಕ್ಕಿ
ಆ) ಮುಕ್ಕಿ
ಇ) ಕುಕ್ಕಿ
ಈ) ಎಕ್ಕಿ
ಉತ್ತರಗಳು:
1)- ಅ, 2)- ಇ, 3)- ಈ, 4)- ಆ, 5)-ಇ
2) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ:
1) ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆಯ ಕತೃ ಯಾರು?
‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆಯ ಕತೃ ದ.ರಾ. ಬೇಂದ್ರೆ.
2) ದ.ರಾ. ಬೇಂದ್ರೆಯವರ ಪೂರ್ಣ ಹೆಸರೇನು?
ದ.ರಾ. ಬೇಂದ್ರೆಯವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ.
3) ದ.ರಾ. ಬೇಂದ್ರೆಯವರ ಕಾವ್ಯನಾಮ ಯಾವುದು?
ದ.ರಾ. ಬೇಂದ್ರೆಯವರ ಕಾವ್ಯನಾಮ ‘ಅಂಬಿಕಾತನಯದತ್ತ’.
4) ದ.ರಾ. ಬೇಂದ್ರೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
ದ.ರಾ.ಬೇಂದ್ರೆ.ಯವರ “ನಾಕುತಂತಿ” ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
5) ಕಾಲಗತಿಯನ್ನು ಯಾವುದಕ್ಕೆ ಸಮೀಕರಿಸಲಾಗಿದೆ?
ಕಾಲಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಲಾಗಿದೆ.
3) ಈ ಕೆಳಗಿನ ವಾಕ್ಯಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1) ದ.ರಾ.ಬೇಂದ್ರೆಯವರು________ದಲ್ಲಿ ಜನಿಸಿದರು.
2) ದ.ರಾ.ಬೇಂದ್ರೆಯವರಿಗೆ ಭಾರತ ಸರ್ಕಾರ _________ ಪುರಸ್ಕಾರ ನೀಡಿ ಗೌರವಿಸಿದೆ.
3) _________ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
4) ನೀಲಮೇಘ ಮಂಡಲ ________ ಬಣ್ಣ.
5) __________ಮುಳುಗಿಸಿ ಖಂಡ ಖಂಡಗಳ.
ಉತ್ತರ :
ಧಾರವಾಡ, ಪದ್ಮಶ್ರೀ, ಅರಳು-ಮರಳು, ಸಮ, ತೇಲಿಸಿ
4) ಈ ಪದ್ಯದಲ್ಲಿ ಬರುವ ಐದು ದ್ವಿರುಕ್ತಿ ಪದಗಳನ್ನು ಗುರ್ತಿಸಿ ಬರೆಯಿರಿ.
1) ಗಾವುದ – ಗಾವುರ
2) ಯುಗ – ಯುಗಗಳು
3) ಗರಿ – ಗರಿ
4) ಬಣ್ಣ – ಬಣ್ಣ
5) ಖಂಡ – ಖಂಡಗಳು
5) ಈ ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬರೆಯಿರಿ:
1) ಸುತ್ತಮುತ್ತಲೂ: ನಾವು ನಮ್ಮ ಸುತ್ತಮುತ್ತಲ *ಪರಿಸರವನ್ನು ಸ್ವಚ್ಚವಾಗಿಡಬೇಕು.
2) ಮುಗಿಲು: ಮುಗಿಲನ್ನು ಕಂಡು ನವಿಲು ಗರಿ ಬಿಚ್ಚಿ ಕುಣಿಯುತ್ತಿದೆ.
3) ಸಾಮ್ರಾಜ್ಯ: ಗುಪ್ತರ ಸಾಮ್ರಾಜ್ಯ ಬಹಳ ವಿಶಾಲವಾಗಿತ್ತು.
4) ಮನ್ವಂತರ: ಜೀವನದಲ್ಲಿ ಮನ್ವಂತರವಾಗದಿದ್ದಲ್ಲಿ ಅದು ನಿಂತ ನೀರಾಗುವುದು.
5) ಚೇತನ: ನಾವು ಹೊಸ ಚೇತನವನ್ನು ಮೂಡಿಸಿ ಕೊಂಡು ಕಾರ್ಯಪ್ರವರ್ತರಾಗಬೇಕು.
ಕಂಠಪಾಠದ ಪದ್ಯಗಳು
ನೀಲಮೇಘ ಮಂಡಲ – ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೂ ಅಣ್ಣಾ
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತ್ತಿದೆ ನೋಡಿದಿರಾ?
ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತ್ತಿದೆ ನೋಡಿದಿರಾ?
ಗದ್ಯವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸುವುದು:
ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
ಪ್ರಶ್ನೆಗಳು :
1. ಹಕ್ಕಿಯು ಹಣೆ ಬರಹವ ಒರೆಸಿ ಏನನ್ನು ತೆರೆಸಿದೆ?
ಹಕ್ಕಿಯು ಹಣೆ ಬರಹವ ಒರೆಸಿ ಮನ್ವಂತರಗಳ ಭಾಗ್ಯವನ್ನು ತೆರೆಸಿದೆ.
2. ಹಕ್ಕಿಯು ಹೇಗೆ ಚೇತನಗೊಳಿಸಿದೆ?
ಹಕ್ಕಿಯು ರೆಕ್ಕೆಯ ಬೀಸುತ ಚೇತನಗೊಳಿಸಿದೆ.
3. ಹಕ್ಕಿಯು ಯಾರನ್ನು ಹರಸಿದೆ?
ಹಕ್ಕಿಯು ಹೊಸಕಾಲದ ಹಸುಮಕ್ಕಳನ್ನು ಹರಸಿದೆ.
4. ಕಾಲಪಕ್ಷಿಯ ಯಾವ ಕಾರ್ಯವನ್ನು ನೀವು ಮೆಚ್ಚುತ್ತೀರಿ ತಿಳಿಸಿ.
ಹಕ್ಕಿಯು ಚೇತನಗೊಳಿಸಿ ಹಸುಮಕ್ಕಳನ್ನು ಹರಸಿರುವ ಕಾರ್ಯ ನನಗೆ ಮೆಚ್ಚುಗೆಯಾಗಿದೆ.
(ವಿದ್ಯಾರ್ಥಿಯು ಸ್ವಾಭಿಪ್ರಾಯದ ಸಾಲನ್ನು ಬರೆಯಬಹುದು)
ಇತರೆ ವಿಷಯಗಳು :
10ನೇ ತರಗತಿ ಕೌರವೇಂದ್ರನ ಕೊಂದೆ ನೀನು ಕನ್ನಡ ನೋಟ್ಸ್
10ನೇ ತರಗತಿ ಛಲಮೆನೆ ಮೆಱೆವೆಂ ಕನ್ನಡ ನೋಟ್ಸ್
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್