10th Standard Chalamane Merevem Poem Kannada Notes | 10ನೇ ತರಗತಿ ಛಲಮೆನೆ ಮೆಱೆವೆಂ ಕನ್ನಡ ನೋಟ್ಸ್

Chalamane Merevem

10th Standard Kannada Chalamane Merevem Notes Question Answer Summery Extract Mcq Pdf Download Kannada Medium karnataka State Syllabus 2025, 10ನೇ ತರಗತಿ ಛಲಮೆನೆ ಮೆಱೆವೆಂ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 10th Kannada 4th Poem Notes, Kseeb Solutions For Class 10 Kannada Poem 4 Notes, Chalamane Merevem Kannada Padya Question Answer, class 10 kouravendrana konde neenu summary, sslc kouravendrana konde neenu question answers in kannada, ಛಲಮನೆ ಮೆರೆವೆಂ ಪದ್ಯದ ಸಾರಾಂಶ ಲಘು ಗುರು, 10th ಛಲಮನೆ ಮೆರೆವೆಂ Notes Pdf, 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು pdf 2025, SSLC Kannada 4th Poem Notes Summary Pdf, 10th Class chalamane merevem kannada padya.

10ನೇ ತರಗತಿ ಛಲಮೆನೆ ಮೆಱೆವೆಂ ಕನ್ನಡ ನೋಟ್ಸ್

ರನ್ನ ಕ್ರಿ.ಶ. ಸುಮಾರು 949ರಲ್ಲಿ (ಹತ್ತನೆಯ ಶತಮಾನದಲ್ಲಿ) ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಈಗಿನ ಮುಧೋಳ್) ಎಂಬ ಗ್ರಾಮದಲ್ಲಿ ಜನಿಸಿದನು. ಇವನ ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ. ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು. ಇವನು ‘ಸಾಹಸ ಭೀಮ ವಿಜಯಂ (ಗದಾಯುದ್ಧ), ‘ಅಜಿತತೀರ್ಥಂಕರ ಪುರಾಣತಿಲಕಂ’, ‘ಪರಶುರಾಮಚರಿತಂ’ ‘ಚಕ್ರೇಶ್ವರಚರಿತಂ’ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ‘ರನ್ನಕಂದ’ ಎಂಬ ನಿಘಂಟನ್ನು ಬರೆದಿರುವುದಾಗಿ ತಿಳಿದುಬರುತ್ತದೆ. ಇವನಿಗೆ ತೈಲಪನು ‘ಕವಿಚಕ್ರವರ್ತಿ’ ಎಂಬ ಬಿರುದನ್ನು ಕೊಟ್ಟನು. ಈತನು ಕನ್ನಡದ ರತ್ನತ್ರಯದಲ್ಲಿ ಒಬ್ಬನು.

1. ‘ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ’ ಎಂದು ದುರ್ಯೋಧನನು ಯಾರಿಗೆ ಹೇಳುವನು?

“ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ’ ಎಂದು ದುರ್ಯೋಧನನು ಭೀಷ್ಮರಿಗೆ ಹೇಳುವನು.

2. ದಿನಪಸುತ ಎಂದರೆ ಯಾರು?

ದಿನಪಸುತ ಎಂದರೆ ಕರ್ಣ.

3. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾರೆ.

ಭೀಮ ಹಾಗೂ ಅರ್ಜುನನನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ.

4. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?

ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ದುರ್ಯೋಧನನು.

5. ಅಂತಕಾತ್ಮಜ ಎಂದರೆ ಯಾರು?

ಯಮನಮಗ ಯುದಿಷ್ಟರ

1. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ?

ನಾನೇನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಹಾಳು ಭೂಮಿ. ಕರ್ಣನನ್ನು ಕೊಲ್ಲಿಸಿದ ಭೂಮಿಯೊಡನೆ ಮತ್ತೆ ನಾನು ಬಾಳುವುದುಂಟೆ?ʼ

ನನ್ನ ಪ್ರೀತಿಯ ಕರ್ಣನನ್ನು ನನ್ನ ಪ್ರೀತಿಯ ತಮ್ಮ ಹಾಗೂ ನೂರು ಮಕ್ಕಳು ಹಾಗೂ ನೂರು ಸೋದರರು ಸತ್ತರು. ನನ್ನಲ್ಲಿ ಕೋಪ ಕೆರಳಿ ದಾರುಣವಾಯಿತು. ಸತ್ತವರೇನು ಮರಳಿ ಹುಟ್ಟುವುದಿಲ್ಲ? ಪಾಂಡವರೊಡನೆ ಕಾದಾಡಿ ನನ್ನ ಛಲವನ್ನೇ ಸಾಧಿಸುವೆನು ಎಂದು ದುರ್ಯೋಧನನು ಹೇಳಿದನು.

2. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋದನ ಹೇಳುವುದೇಕೆ?

ಈ ಭೂಮಿ ನನಗೆ ಹಾಳು ಭೂಮಿ. ಕರ್ಣನನ್ನು ಕೊಲ್ಲಿಸಿದ ಭೂಮಿಯೊಡನೆ ಮತ್ತೆ ನಾನು ಬಾಳುವುದುಂಟೆ?’ ನನ್ನ ಪ್ರೀತಿಯ ಕರ್ಣ | ಜೀವಂತವಾಗಿರುವವರೆಗೆ ಅವರೊಂದಿಗೆ ಸಂಧಿ ಮಾಡಿಕೊಂಡು ಸಹಬಾಳ್ವೆ ಮಾಡಲಾರೆ. ನನ್ನ ನೂರ್ವರು ಮಕ್ಕಳು ಹಾಗೂ ನೂರ್ವರು ಸೋದರರು ಶತ್ರುಗಳನ್ನು ಎದುರಿಸಿ ಸತ್ತರು. ಅಂಥಹ ಪಾಂಡವರೊಡನೆ ಛಲ ಸಾಧಿಸದೆ ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನನು ಹೇಳಿದನು.

3. ಪಾರ್ಥ-ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು?

ಪಾರ್ಥನು ತನ್ನ ಪ್ರೀತಿಯ ಗೆಳೆಯನಾದ ಕರ್ಣನನ್ನು ಕೊಂದನು. ಭೀಮನು ಪ್ರೀತಿಯ ತಮ್ಮನನ್ನು ಕೊಂದನು. ಅವರಿಬ್ಬರನ್ನು ಕೊಂದು ತನ್ನ ಛಲವನ್ನು ತೀರಿಸಿಕೊಳ್ಳುವೆನು. ಅವರನ್ನು ಕೊಲ್ಲುವವರೆಗೂ ತನ್ನ ಮನಸ್ಸಿಗೆ ನೆಮ್ಮದಿ ಇಲ್ಲ. ಅದಕ್ಕಾದರೂ ತಾನು ಯುದ್ಧ ಮಾಡದೆ ಬಿಡೆನು ಎಂಬುದಾಗಿ ಹೇಳುತ್ತಾ ಪಾರ್ಥ ಭೀಮರ ಬಗ್ಗೆ ತನ್ನ ದ್ವೇಷದ ಭಾವನೆಯನ್ನು ವ್ಯಕ್ತಪಡಿಸುತ್ತಾ ದುರ್ಯೋಧನನು ಸೇಡಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದನು.

1. ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ.

ದುರ್ಯೋಧನನು ತಂದೆ-ತಾಯಿಯರ ಅಪೇಕ್ಷೆಯಂತೆ ಯುದ್ಧ ಭೂಮಿಯಲ್ಲಿ ಶರಶಯ್ಕೆಯಲ್ಲಿ ಮಲಗಿದ್ದಕ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ. ಆಗ ಭೀಷ್ಮರು ದುರ್ಯೋಧನನಿಗೆ (ವಚನ) ‘ಇನ್ನು ನಾನು ಹೇಳುವ ಮಾತನ್ನು ಒಪ್ಪಿಕೋ, ಒಪ್ಪುವೆಯಾದರೆ ಪಾಂಡವರನ್ನು ಬಡಂಬಡಿಸಿ ಒಪ್ಪಂದ ಮಾಡಿ ಮೊದಲಿನಂತೆ ಕೂಡಿ ನಡೆಯುವ ಹಾಗೆ ಮಾಡುವೆನು. ಈಗಲಾದರೂ ಅವರು ನಮ್ಮ ಮಾತನ್ನು ಕೇಳುತ್ತಾರೆ. ಮೀರುವವರಲ್ಲ, ನೀನು ಕೂಡ ನಮ್ಮ ಮಾತನ್ನು ಮೀರದೆ ನಡೆದುಕೋ’ ಎಂದು ನುಡಿಯಲಾಗಿ ದುರ್ಯೋಧನನು ಮುಗುಲ್ನಕ್ಕು

“ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನಲ್ಲದೆ ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸಲೆಂದು ನಾನು ಬಂದೆನೆ ? ಅಜ್ಜ, ಯುದ್ಧಲ್ಲಿ ಇನ್ನು ನನ್ನ

ಕಾರ್ಯವೇನೆಂಬುದನ್ನು ಹೇಳಿ. ‘ನಾನೇನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ? ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಹಾಳು ಭೂಮಿ ಕರ್ಣನನ್ನು ಕೊಲ್ಲಿಸಿದ ಭೂಮಿ ಮತ್ತೆ ನಾನು ಬಾಳುವುದುಂಟೆ?’

ನನ್ನ ಪ್ರೀತಿಯ ಕರ್ಣನನ್ನು ನನ್ನ ಪ್ರೀತಿಯ ತಮ್ಮ ದುಶ್ಯಾಸನನ್ನು ಕೊಂದ ಭೀರ್ಮಾಜುನನು ಜೀವಂತವಾಗಿರುವವರೆಗೆ ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ನಾನು ಸಂಧಿಗೆ ಒಪ್ಪಲಾರೆನು ಅಜ್ಜ. ಮೊದಲು ಆ ಇಬ್ಬರನ್ನು ಕೊಲ್ಲುವೆನು. ನಂತರ ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿ ಮಾಡಿಕೊಳ್ಳೋಣ. ನನ್ನ ದುಃಖ ಆರಿದ ಮೇಲೆ ಅದು ಬೇಡವೆನ್ನುವನು?

ನನ್ನ ನೂರ್ವರು ಮಕ್ಕಳು ನೂರ್ವರು ಸೋದರರು ಶತ್ರುಗಳನ್ನು ಎದುರಿಸಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪ ಕೆರಳಿ ದಾರುಣವಾಯಿತು. ಸತ್ತವರು ಮರಳಿ ಹುಟ್ಟುವರೆ? ಪಾಂಡವರೊಡನೆ ಕಾದಾಡಿ ನನ್ನ ಛಲವನ್ನೇ ಸಾಧಿಸುವೆನು.

ಅಜ್ಜ, ನಾನು ಕಾದಾಡದೆ ಬಿಡಲಾರೆ, ಇಂದಿನ ಒಂದು (ಕಾಳಗದಲ್ಲಿ) ಯುದ್ಧದಲ್ಲಿ ಪಾಂಡವರು ಉಳಿಯಬೇಕು. ಇಲ್ಲವೆ ನಾನು ಉಳಿಯಬೇಕು. ಇದರಿಂದ ಭೂಮಿಯ ಒಡೆತನ ಪಾಂಡವರಿಗೆ ಹೋಗಬೇಕು. ಇಲ್ಲವೆ ಕೌರವನಿಗೆ ಉಳಿಯಬೇಕು’ ಎಂದು ದುರ್ಯೋಧನನು ಭೀಷ್ಮರಿಗೆ ಹೇಳಿದನು.

2. ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ.

ಉತ್ತರ : ದುರ್ಯೋಧನನು ತಂದೆ-ತಾಯಿಯರ ಅಪೇಕ್ಷೆಯಂತೆ ಯುದ್ಧ ಭೂಮಿಯಲ್ಲಿ ಶರಶಯ್ಕೆಯಲ್ಲಿ ಮಲಗಿದ್ದಕ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ. ಆಗ ಭೀಷ್ಮರು ದುರ್ಯೋಧನನಿಗೆ (ವಚನ) ‘ಇನ್ನು ನಾನು ಹೇಳುವ ಮಾತನ್ನು ಒಪ್ಪಿಕೋ, ಒಪ್ಪುವೆಯಾದರೆ ಪಾಂಡವರನ್ನು ಬಡಂಬಡಿಸಿ ಒಪ್ಪಂದ ಮಾಡಿ ಮೊದಲಿನಂತೆ ಕೂಡಿ ನಡೆಯುವ ಹಾಗೆ ಮಾಡುವೆನು. ಈಗಲಾದರೂ ಅವರು ನಮ್ಮ ಮಾತನ್ನು ಕೇಳುತ್ತಾರೆ. ಮೀರುವವರಲ್ಲ, ನೀನು ಕೂಡ ನಮ್ಮ ಮಾತನ್ನು ಮೀರದೆ ನಡೆದುಕೋ’ ಎಂದು ನುಡಿಯಲಾಗಿ ದುರ್ಯೋಧನನು ಮುಗುಲ್ನಕ್ಕು

“ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನಲ್ಲದೆ ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸಲೆಂದು ನಾನು ಬಂದೆನೆ ? ಅಜ್ಜ, ಯುದ್ಧಲ್ಲಿ ಇನ್ನು ನನ್ನ ಕಾರ್ಯವೇನೆಂಬುದನ್ನು ಹೇಳಿ. ‘ನಾನೇನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ? ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಹಾಳು ಭೂಮಿ, ಕರ್ಣನನ್ನು ಕೊಲ್ಲಿಸಿದ ಭೂಮಿ ಮತ್ತೆ ನಾನು ಬಾಳುವುದುಂಟೆ?’

ನನ್ನ ಪ್ರೀತಿಯ ಕರ್ಣನನ್ನು ನನ್ನ ಪ್ರೀತಿಯ ತಮ್ಮ ದುಶ್ಯಾಸನನ್ನು ಕೊಂದ ಭೀರ್ಮಾಜುನನು ಜೀವಂತವಾಗಿರುವವರೆಗೆ ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ನಾನು ಸಂಧಿಗೆ ಒಪ್ಪಲಾರೆನು ಅಜ್ಜ. ಮೊದಲು ಆ ಇಬ್ಬರನ್ನು ಕೊಲ್ಲುವೆನು. ನಂತರ ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿ ಮಾಡಿಕೊಳ್ಳೋಣ. ನನ್ನ ದುಃಖ ಆರಿದ ಮೇಲೆ ಅದು ಬೇಡವೆನ್ನುವನು?

ನನ್ನ ನೂರ್ವರು ಮಕ್ಕಳು ನೂರ್ವರು ಸೋದರರು ಶತ್ರುಗಳನ್ನು ಎದುರಿಸಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪ ಕೆರಳಿ ದಾರುಣವಾಯಿತು. ಸತ್ತವರು ಮರಳಿ ಹುಟ್ಟುವರೆ? ಪಾಂಡವರೊಡನೆ ಕಾದಾಡಿ ನನ್ನ ಛಲವನ್ನೇ ಸಾಧಿಸುವೆನು.

ಅಜ್ಜ, ನಾನು ಕಾದಾಡದೆ ಬಿಡಲಾರೆ, ಇಂದಿನ ಒಂದು (ಕಾಳಗದಲ್ಲಿ) ಯುದ್ಧದಲ್ಲಿ ಪಾಂಡವರು ಉಳಿಯಬೇಕು. ಇಲ್ಲವೆಕ ನಾನು ಉಳಿಯಬೇಕು. ಇದರಿಂದ ಭೂಮಿಯ ಒಡೆತನ ಪಾಂಡವರಿಗೆ ಹೋಗಬೇಕು. ಇಲ್ಲವೆ ಕೌರವನಿಗೆ ಉಳಿಯಬೇಕು’ ಎಂದು ದುರ್ಯೋಧನನು ಭೀಷ್ಮರಿಗೆ ಹೇಳಿದನು.

ಈ) ಸಂರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ :

1. ‘ನೆಲಕಿಪೆವೆನೆಂದು ಬಗೆದಿದೆಕ ಚಲಕಿಪಿವೆಂ’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ರನ್ನ’ ನ “ಸಾಹಸಭೀಮ ವಿಜಯಂ’ನ ಐದನೇ ಆಶ್ವಾಸದಿಂದ ಆರಿಸಲಾಗಿದೆ. ಇದನ್ನು ಪ್ರೊ. ಹಂಪ ನಾಗರಾಜಯ್ಯರವರು ಸಂಪಾದಿಸಿರುವರು. ಪದ್ಯಭಾಗದ ‘ಛಲಮನೆ ಮೆಛಿವೆಂ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ರಣರಂಗದಲ್ಲಿ ಶರಶೈಯ್ಯ ಮೇಲೆ ಮಲಗಿದ್ದ ಭೀಷ್ಮರನ್ನು ಕಾಣಲು ಬಂದಾಗ ದುರ್ಯೋಧನನು ಭೀಷ್ಮರನ್ನು ಕಂಡು ಈ ಮಾತನ್ನು ಹೇಳಿದನು

ಭಾವಾರ್ಥ: ದುರ್ಯೋಧನನು ಭೀಷ್ಮರನ್ನು ಕುರಿತು ಈ ರೀತಿ ಹೇಳಿದನು. ನಾನೇನು ನೆಲಕ್ಕಾಗಿ (ಭೂಮಿಗಾಗಿ) ಹೋರಾಡುವೆನೆಂದು ಭಾವಿಸಿದಿರಾ? ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು ಎಂಬುದಾಗಿ ಹೇಳಿದನು.

ವಿಶೇಷತೆ : ದುರ್ಯೋಧನ ಛಲದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

2. ‘ಸಮರದೊಳೆನಗಜ್ಜ ಪೇಟೆಯಾವುದು ಕಜ್ಜಂ’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ರನ್ನ’ ನ “ಸಾಹಸಭೀಮ ವಿಜಯಂ” ನ ಐದನೇ ಆಶ್ವಾಸದಿಂದ ಆರಿಸಲಾಗಿದೆ. ಇದನ್ನು ಪ್ರೊ. ಹಂಪ ನಾಗರಾಜಯ್ಯರವರು ಸಂಪಾದಿಸಿರುವರು. ಪದ್ಯಭಾಗದ ‘ಛಲಮನೆ ಮೆಛಿವೆಂ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ದುರ್ಯೋಧನನು ರಣಭೂಮಿಗೆ ಬಂದು ಭೀಷ್ಮರಿಗೆ ನಮಸ್ಕರಿಸಿದಾಗ ಭೀಷ್ಮರು ಸಂಧಿಗೆ ಒಪ್ಪಿಕೊಳ್ಳಲು ಹೇಳಿದರು. ಆಗ ದುರ್ಯೋಧನನು ಈ ವಾಕ್ಯವನ್ನು ಹೇಳಿದನು.

ಭಾವಾರ್ಥ : ದುರ್ಯೋಧನನು ಭೀಷ್ಮರನ್ನು ಕುರಿತು ʼಅಜ್ಜಾ, ನಾನು ನಿಮಗೆ ನಮಸ್ಕರಿಸಿ ಹೋಗಬೇಕೆಂದು ಬಂದೆನಲ್ಲದೆ ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸಲೆಂದು ನಾನು ಬಂದವನಲ್ಲ, ಯುದ್ಧದಲ್ಲಿ ನನ್ನ ಕಾರ್ಯವೆನೆಂಬುದನ್ನು ಹೇಳಿ’ ಎಂದು ಕೇಳಿದನು.

ವಿಶೇಷತೆ : ದುರ್ಯೋಧನನು ತನ್ನ ಛಲದ ಮಾತುಗಳನ್ನು ತಾನು ಯುದ್ಧ ಮುಂದುವರೆಸುವ ತನ್ನಿಚ್ಛೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾನೆ.

3. ‘ಪಾಂಡವರೊಳಿದು ಛಲಮನೆ ಮೆರೆವೆಂ’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ರನ್ನ’ ನ “ಸಾಹಸಭೀಮ ವಿಜಯಂ” ನ ಐದನೇ ಆಶ್ವಾಸದಿಂದ ಆರಿಸಲಾಗಿದೆ. ಇದನ್ನು ಪ್ರೊ. ಹಂಪ ನಾಗರಾಜಯ್ಯರವರು ಸಂಪಾದಿಸಿರುವರು. ಪದ್ಯಭಾಗದ ‘ಛಲಮನೆ ಮೆಛಿವೆಂ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ರಣರಂಗದಲ್ಲಿ ಭೀಷ್ಮರೊಡನೆ ತನ್ನ ದುಃಖವನ್ನು ತೋಡಿಕೊಳ್ಳುತ್ತಾ ಈ ಮಾತನ್ನು ಹೇಳುವನು.

ಭಾವಾರ್ಥ : ನನ್ನ ನೂರ್ವರು ಮಕ್ಕಳು ನೂರ್ವರು ಸೋದರರು ಶತ್ರುಗಳನ್ನು ಎದುರಿಸಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪ ಕೆರಳಿ ದಾರುಣವಾಯಿತು. ಸತ್ತವರು ಮರಳಿ ಹುಟ್ಟುವರೆ? ಪಾಂಡವರೊಡನೆ ಕಾದಾಡಿ ನನ್ನ ಛಲವನ್ನೇ ಸಾಧಿಸುವೆನು’ ಎಂಬುದಾಗಿ ತನ್ನ ದುಃಖ ನೋವುಗಳನ್ನು ರೋಷದಿಂದ ತೋಡಿಕೊಂಡನು.

ವಿಶೇಷತೆ : ದುರ್ಯೋಧನನ ಛಲದ ಗುಣ ಇಲ್ಲಿ ವ್ಯಕ್ತವಾಗಿದೆ.

4. ‘ಮೇಣಾಯ್ತು ಕೌರವಂ ಗವನಿತಳಂ’

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ರನ್ನ’ ನ “ಸಾಹಸಭೀಮ ವಿಜಯಂ” ನ ಐದನೇ ಆಶ್ವಾಸದಿಂದ ಆರಿಸಲಾಗಿದೆ. ಇದನ್ನು ಪ್ರೊ. ಹಂಪ ನಾಗರಾಜಯ್ಯರವರು ಸಂಪಾದಿಸಿರುವರು. ಪದ್ಯಭಾಗದ ‘ಛಲಮನೆ ಮೆಛಿವೆಂ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಭೀಷ್ಮರಿಗೆ ತನ್ನ ಮನದ ಇಂಗಿತವನ್ನು ತಿಳಿಸುತ್ತಾ ದುರ್ಯೋಧನನು ಈ ವಾಕ್ಯವನ್ನು ಹೇಳಿದನು.

ಭಾವಾರ್ಥ : ‘ಅಜ್ಜಾ, ನಾನು ಪಾಂಡವರೊಡನೆ ಕಾದಾಡದೇ ಬಿಡಲಾರೆ. ಇಂದಿನ ಒಂದು ಕಾಳಗದಲ್ಲಿ ಪಾಂಡವರು ಉಳಿಯಬೇಕು, ಇಲ್ಲವೆ ನಾನು ಉಳಿಯಬೇಕು. ಅದರಿಂದ ಭೂಮಿಯ ಒಡೆತನ ಪಾಂಡವರಿಗೆ ಹೋಗಬೇಕು ಇಲ್ಲವೆ ಕೌರವನಿಗೆ ಉಳಿಯಬೇಕು.

ವಿಶೇಷತೆ : ದುರ್ಯೋಧನನ ಛಲದ ಮಾತುಗಳು ಇಲ್ಲಿ ಕೇಳಿಬರುತ್ತವೆ.

(ಉತ್ಪಲ ಮಾಲಾವೃತ್ತ)

  1. ಕಾರ್ಯ – ಕಜ್ಜ
  2. ಆರ್ಯ – ಅಜ್ಜ
  1. ಪಾರ್ಥಿಭೀಮರು= ಪಾರ್ಥ + ಭೀಮ = ದ್ವಂದ್ವ ಸಮಾಸ
  2. ಅಂತರಾತ್ಮಜ = ಅಂತಕ + ಆತ್ಮಜ = ಬಹುವೀಹಿ ಸಮಾಸ
  3. ದಿನಪಸುತ = ದಿನಪ + ಸುತಂ = ಬಹುವೀಹಿ ಸಮಾಸ

1) ನೆಲೆಕಿಛಿವೆನೆಂದು ಬಗೆದಿರೆ!

ಚಲರೆಭಿವೆಂ ಪಾಂಡುಸುತರೊಳೀ ನೆಲನಿದು ಪಾ ||

ಛಲನೆನಗೆ ದಿನಪಸುತನಂ ।

ಕೊಲಿಸಿದ ನೆಲನೊಡನೆ ಮತ್ತೆ ಪುರಾವಾಛ್ದಿ ಪೆನೇ ॥

2) ಪುಟ್ಟಿದ ನೂರ್ವರುಮೆನ್ನೊಡ |

ವುಟ್ಟಿದ ನೂರ್ವರು ಮಿರಿರ್ಚಿ ಸತ್ತೊಡೆ ಕೋಪಂ ॥

ಪುಟ್ಟಿ ಪೊದಮ್ದಿದು ಸತ್ತ‌ರ್

ಪುಟ್ಟರೆ ಪಾಂಡುವರೊಳಿಛಿದು ಛಲಮನೆ ಮೆಛೆವೆಂ ॥

10ನೇ ತರಗತಿ ಹಕ್ಕಿ ಹಾರುತಿದೆ ನೋಡಿದಿರಾ ಕನ್ನಡ ನೋಟ್ಸ್

10ನೇ ತರಗತಿ ಕೌರವೇಂದ್ರನ ಕೊಂದೆ ನೀನು ಕನ್ನಡ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *