10th Standard Halagali Bedaru Kannada Notes Question Answer Summary Extract Mcq Pdf Download in Kannada Medium Karnataka State Syllabus 2025 Kseeb Solutions for Class 10 Kannada Poem 5 Notes 10th Class Kannada 5th Poem Notes Kannada 10ನೇ ತರಗತಿ ಹಲಗಲಿ ಬೇಡರು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು ಹಲಗಲಿ ಬೇಡರು Notes ಹಲಗಲಿ ಬೇಡರು question answer ಹಲಗಲಿ ಬೇಡರು 10ನೇ ತರಗತಿ ಪದ್ಯ class 10 kannada halagali bedaru notes class 10 halagali bedaru summary in kannada ಹಲಗಲಿ ಬೇಡರು ಸಾರಾಂಶ ಹಲಗಲಿ ಬೇಡರ ಇತಿಹಾಸ 10th std halagali bedaru notes in kannada 10th class halagali bedaru poem in kannada ಹಲಗಲಿ ಬೇಡರು ಪ್ರಶ್ನೋತ್ತರಗಳು.

10ನೇ ತರಗತಿ ಹಲಗಲಿ ಬೇಡರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು.
ಕೃತಿಕಾರರ ಪರಿಚಯ
ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ವೀರತನ ಸಾಹಸವನ್ನು ವರ್ಣಿಸುವುದರಿಂದ ಲಾವಣಿ ಎಂದರೆ ‘ವೀರಗೀತೆ, ಎಂದು ಕರೆಯುವುದು ವಾಡಿಕೆ. ಏಕೈಕ ಘಟನೆಯನ್ನಾಧರಿಸಿದ್ದು ಕಥಾನಾತ್ಮಕವಾಗಿರುವ ಲಾವಣಿಗಳು ಹಾಡಿನ ರೂಪದಲ್ಲಿ ಕಟ್ಟಿದ ಕತೆ. ಜನಸಾಮಾನ್ಯರು ರಚಿಸಿರುವ ಲಾವಣಿಗಳು ವಸ್ತುನಿಷ್ಠವಾಗಿರುತ್ತದೆ. ಹಿಂದಿನಿಂದ ವಾಕ್ಷರಂಪರೆಯಲ್ಲಿ ಉಳಿದು ಬಂದಿದ್ದು, ಐತಿಹಾಸಿಕ ಮಹತ್ವ ಪಡೆದಿವೆ. ಗದ್ಯದ ಹೊಳಪನ್ನು ಭಾವಗೀತದ ಸತ್ವವನ್ನು ಹೊಂದಿರುವ ಲಾವಣಿಗಳು ಧ್ವನಿ ರಮ್ಯತೆಯನ್ನು ಅರ್ಥಸೌಂದರ್ಯವನ್ನು ಹೊಂದಿದೆ.
ಪದಗಳ ಅರ್ಥ
ಅಗಸಿ – ಹೆಬ್ಬಾಗಿಲು | ಕಸರತ್ತು – ಚಮತ್ಕಾರ |
ಕಾರಕೂನ – ಗುಮಾಸ್ತ | ಕುಮಕಿ – ಸಹಾಯಕ, ಒತ್ತಾಸೆ |
ಕೊಳ್ಳಿ – ಬೆಂಕಿ | ಘಾತಕ – ದ್ರೋಹಿ |
ಘೋರ – ಆಪತ್ತು | ಚರಿಗೆ – ತಂಬಿಗೆ |
ಜತ್ತ – ಜೊತೆ | ಜಲದ – ತೀವ್ರ |
ಟಾರಾ – ನಾಶ | ದಂಡು – ಸೈನ್ಯ |
ಭಂಟ – ವೀರ | ಭರಪೂರ – ಪ್ರವಾಹ |
ಲೂಟಿ – ಸುಲಿಗೆ | ವಿಲಾತಿ – ವಿಲಾಯಿತಿ |
ಹತಾರ – ಆಯುಧ | ಮಸಲತು – ಪಿತೂರಿ, ಒಳಸಂಚು |
ಹುಕುಂ – ಆದೇಶ |
ಟಿಪ್ಪಣಿ:
- ಚಟೆಕಾರರು – ಆಂಗ್ಲೋ ಇಂಡಿಯನ್
- ಹೆಬಲಕ ಸಾಬ್ – ಹೆನ್ರಿ ಹ್ಯಾವ್ಲಾಕ್ ಎಂಬ ಬ್ರಿಟಿಷ್ ಅಧಿಕಾರಿ
- ಕಾರಸಾಹೇಬ – ಅಲೆಗ್ಜ್ರಾಂಡರ್ ವಿಲಿಯಂ ಕೆರ್ರೆ ಎಂಬ ಬ್ರಿಟಿಷ್ ಅಧಿಕಾರಿ
- ಕುಂಪಣಿ : ಕಂಪನಿ – ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಿಟಿಷ್ ಸರ್ಕಾರ ರಚಿಸಿದ್ಧ ಆಡಳಿತಾತ್ಮಕ ಸಂಸ್ಥೆ
ಅಭ್ಯಾಸ:
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1) ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು?
ಆಯುಧಗಳನ್ನು ಒಪ್ಪಿಸಬೇಕೆಂಬ ಆದೇಶವನ್ನು ಕುಂಪಣಿ ಸರಕಾರ ಹೊರಡಿಸಿತು.
2) ಹಲಗಲಿಯ ನಾಲ್ವರು ಪ್ರಮುಖರು ಯಾರು?
ಹಲಗಲಿಯ ನಾಲ್ವರು ಪ್ರಮುಖರೆಂದರೆ – ರಾಮ, ಬಾಲ, ಹನುಮ, ಜಡಗ.
3) ಹಲಗಲಿಯ ಗುರುತು ಉಳಿಯದಂತಾದುದು ಹೇಗೆ?
ಕಂಪನಿ ಸರಕಾರ ಹಲಗಲಿಯ ಮೇಲೆ ಮುತ್ತಿಗೆ ಹಾಕಿ ಗುಂಡು ಹಾರಿಸಿ ಸುಟ್ಟು ಹಾಕಿದರು. ಇದರಿಂದ ಹಲಗಲಿಯ ಗುರುತು ಉಳಿಯದಂತಾಯಿತು.
4) ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
‘ಹಲಗಲಿಯ ಬಂಟರ ಹತಾರ ಕದನ’ ಎಂಬ ವೀರ ರಸಯುಕ್ತವಾದ ಹಾಡುಗಳು ಹಲಗಲಿ ಬೇಡರ ಲಾವಣಿಗೆ ಕಾರಣವಾಗಿದೆ.
5) ಹಲಗಲಿ ಗ್ರಾಮ ಎಲ್ಲಿದೆ?
ಬಾಗಲಕೋಟೆ ಜಿಲ್ಲೆಯ (ಅಂದು ಇದನ್ನು ಕಲಾರಗಿ ಜಿಲ್ಲೆ ಎನ್ನುತ್ತಿದ್ದರು) ಉತ್ತರಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಹಲಗಲಿ ಇದೆ. ಹಿಂದೆ ಇದು ಮುದೋಳ ಸಂಸ್ಥಾನಕ್ಕೆ ಸೇರಿತ್ತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
1) ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು?
ಬ್ರಿಟಿಷ್ ಕಂಪನಿ ಸರಕಾರವು ಹಲಗಲಿಯವರು ಯಾರೂ ಯಾವುದೇ ರೀತಿಯ ಆಯುಧಗಳನ್ನು ಬಳಸುತ್ತಿದ್ದರೂ ಅದನ್ನು ಬ್ರಿಟಿಷರಿಗೆ ಒಪ್ಪಿಸಬೇಕಾಗಿತ್ತು. ಹೀಗೆ ಮಾಡುವುದರಿಂದ ತಾವು ಅವರ ಗುಲಾಮಗಿರಿಯನ್ನು ಒಪ್ಪಿಕೊಂಡಂತೆ ಆಗುವುದೆಂದು ತಿಳಿದು ಹಲಗಲಿಯ ಬೇಡರು ದಂಗೆ ಎದ್ದರು.
2) ಹಲಗಲಿಗೆ ದಂಡು ಬರಲು ಕಾರಣವೇನು?
ಹಲಗಲಿಯ ಯುವಕರು ಆಯುಧ ಕೊಡದಿದ್ದಾಗ ಹನುಮ, ಜಡಗರನ್ನು ಹುಡುಕಾಡತೊಡಗಿದರು. ಬ್ರಿಟಿಷರ ವಿರುದ್ಧ ದಂಗೆ ಎದ್ದು ಹೆಬಲರ್ ಎಂಬ ಅಧಿಕಾರಿಯನ್ನು ಕೊಂದು ಹಾಕಿದರು. ಇದರಿಂದ ಕ್ರೋಧಗೊಂಡ ಕಂಪನಿಸರ್ಕಾರವು ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದರು.
3) ದಂಡು ಹಲಗಲಿಯ ಮೇಲೆ ಹೇಗೆ ಧಾಳಿ ನಡೆಸಿತು?
ಹಲಗಲಿಯ ಮೇಲೆ ಧಾಳಿ ಮಾಡಿದ ದಂಡು ಮೊದಲಿಗೆ ಹಲಗಲಿ ಜನರ ಆಯುಧಗಳನ್ನು ಕಸಿದುಕೊಳ್ಳತೊಡಗಿದರು. ಆದರೆ ಹಲಗಲಿಯವರು ತಾವು ಬೇಡರು, ಬೇಟೆಯಾಡಿ ಜೀವನ ಮಾಡಬೇಕು. ಹತ್ಯಾರ ಕೊಟ್ಟರೆ ತಮ್ಮ ಜೀವನ ಹೇಗೆ ಸಾಗಿಸುವುದು ಎಂದು ವಾದಿಸಿದಾಗ ದಂಡಿನ ಸಿಪಾಯಿ ಜಗಳ ಹೂಡಿ ಬಲವಂತವಾಗಿ ಹತಾರವನ್ನು ಕಸಿದುಕೊಳ್ಳತೊಡಗಿ ಕೊಡದಿದ್ದವರ ಮೇಲೆ ಗುಂಡು ಹಾರಿಸತೊಡಗಿದರು.
4) ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?
ಲಾವಣಿಗಳನ್ನು ವೀರಗೀತೆಗಳು ಎನ್ನುವರು. ಏಕೆಂದರೆ ಲಾವಣಿ ಜಾನಪದ ಸಾಹಿತ್ಯದ ಪ್ರಕಾರವಾದುದು ಇದು ಒಂದು ವಿಶಿಷ್ಟ ಬಗೆಯ ಕಥನಗೀತವಾಗಿದೆ. ಅಂದರೆ ಕಥೆಯನ್ನು ಹಾಡಿನ ರೂಪದಲ್ಲಿ ಹಾಡುವುದು. ಇದಕ್ಕೆ ಅವರು ಆರಿಸಿಕೊಳ್ಳುವ ಸಾಹಿತ್ಯವೆಂದರೆ ಸಾಹಸ ಹಾಗೂ ವೀರತೆಯನ್ನು ಅನುಸರಿಸುವ ವರ್ಣಿಸುವ ಗೀತೆಗಳಾಗಿರುವುದರಿಂದ ಲಾವಣಿಗಳನ್ನು ವೀರಗೀತೆಗಳೆಂದು ಕರೆಯುವರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ:
1) ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅನಂತರ ಭಾರತೀಯರ ಮೇಲೆ ನಿಶ್ಯಸ್ತ್ರೀಕರಣದ ಹುಕುಂನ್ನು ಹೊರಡಿಸಿತು. ಇದರ ಪ್ರಕಾರ ಯಾವುದೇ ಒಬ್ಬ
ಭಾರತೀಯನು ಆಯುಧಗಳನ್ನು ಇಟ್ಟುಕೊಳ್ಳುವ ಹಾಗಿರಲಿಲ್ಲ. ಇಟ್ಟುಕೊಂಡಲ್ಲಿ ಅದನ್ನು ತಕ್ಷಣವೇ ಬ್ರಿಟಿಷ್ ಕಂಪನಿಗೆ ತಮ್ಮಲ್ಲಿದ್ದ ಎಲ್ಲಾ ಆಯುಧಗಳನ್ನು ಒಪ್ಪಿಸಬೇಕಾಗಿತ್ತು. ಈ ಆದೇಶವನ್ನು ಕೇಳಿ ಹಲಗಲಿಯ ಮಂದಿ ದಂಗೆ ಎದ್ದರು. ತಾವು ಬೇಡರು, ಬೇಟೆಯಾಡಿ ಜೀವನ ಸಾಗಿಸುವ ತಾವು ಶಸ್ತ್ರಗಳನ್ನು ನೀಡಿದರೆ ಜೀವನ ಮಾಡಲು ಆಗುವುದಿಲ್ಲವೆಂದು ವಾದಿಸಿದರು. ಅದಕ್ಕಿಂತ ಹೆಚ್ಚಾಗಿ ತಾವು ಬ್ರಿಟಿಷರಿಗೆ ತಮ್ಮ ಹತಾರಗಳನ್ನು ಒಪ್ಪಿಸಿದರೆ ತಾವು ಅವರ ಗುಲಾಮಗಿರಿಯನ್ನು ಒಪ್ಪಿಕೊಂಡಂತಾಗು ವುದೆಂದು ಆಯುಧಗಳನ್ನು ಕೊಡಲು ನಿರಾಕರಿಸಿದರು.
ಆದರೆ ಸರಕಾರ ಆಯುಧಗಳನ್ನು ಕೊಡಲೊಪ್ಪದವರ ಮೇಲೆ ದಂಗೆ ಎದ್ದರು ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗು ಬಡಿದರು. ಗುಂಡು ಹಾರಿಸಿ ‘ಹಲಗಲಿಯನ್ನು ಸುಟ್ಟುಹಾಕಿದರು.
2) ಹಲಗಲಿಯ ದಂಗೆಯ ಪರಿಣಾಮವೇನು?
ಆಯುಧ ಒಪ್ಪಿಸದ ಹಲಗಲಿಯ ಬೇಡರ ಮೇಲೆ ಆದೇಶ ಹೊರಡಿಸುವುದರ ಮೂಲಕ ಅವರಲ್ಲಿದ್ದ ಬಿಲ್ಲು, ಬಾಣ, ಕತ್ತಿ, ಭರ್ಜಿ ಎಲ್ಲವನ್ನು ಕಂಪನಿ ಸರ್ಕಾರ ಕಸಿದುಕೊಳ್ಳತೊಡಗಿತು. ಕೊಡದಿದ್ದಾಗ ಅವರನ್ನು ಒಡೆದು ಬಡಿದು ಬಲವಂತದಿಂದ ಅಸ್ತಗಳನ್ನು ವಶಪಡಿಸಿಕೊಂಡರು.
ಇದರಿಂದ ಸಿಟ್ಟಿಗೆದ್ದ ಹಲಗಲಿಯ ಯೋಧರು ಹೆಬಲರ್ ಎಂಬ ಅಧಿಕಾರಿಯನ್ನು ಕೊಂದು ಹಾಕಿದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಕಂಪನಿ ಸರ್ಕಾರವು ಹಲಗಲಿಯ ಮೇಲೆ ದಂಗೆ ಎದ್ದರು. ಊರನ್ನೇ ಲೂಟಿ ಮಾಡಿದರು. ಹಲಗಲಿಯ ಬಳಿ ಅಂತಹ ಸಾಕಷ್ಟು ಬಂಟರೂ ಅಸುನೀಗಿದರು. ಹಲಗಲಿಯ ನೆಲದ ಮೇಲೆ ರಕ್ತದ ಕಾಲುವೆ ಹರಿಯಿತು. ದವಸವೆಲ್ಲಾ ದೋಚಿದರು. ಎಲ್ಲವನ್ನೂ ನಾಶಪಡಿಸಿದರು. ಮನೆಯಲ್ಲಿದ್ದ ಕೊಡಲಿ, ಕೊರೆ ಕಬ್ಬಿಣ, ಆಹಾರಧಾನ್ಯಗಳು ಎಲ್ಲವನ್ನು ಎಳ್ಳಷ್ಟು ಬಿಡದೆ ದೋಚಿದರು. ಕಂಪನಿ ಸರ್ಕಾರ ಊರಿಗೆ (ಹಲಗಲಿಗೆ) ಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿದರು.
ಈ) ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ:
1) “ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ”
ಪ್ರಸ್ತಾವನೆ: ಪ್ರಸ್ತುತ ಈ ಸಾಲನ್ನು ಜಾನಪದ ಸಾಹಿತ್ಯ ದಿಂದ ಆರಿಸಲಾದ “ಹಲಗಲಿ ಬೇಡರು” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕಂಪನಿ ಸರ್ಕಾರ ‘ನಿಶಸೀಕರಣ’ ಕಾಯಿದೆ ಹೊರಡಿಸಿ ಎಲ್ಲಾ ಜನರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳತೊಡಗಿದರು. ಕೊಡಲು ಒಪ್ಪದಿದ್ದವರನ್ನು ಬಗ್ಗು ಬಡಿದು ಕಸಿದುಕೊಳ್ಳಲಾಯಿತು. ಹಲಗಲಿಯಲ್ಲಿ ನಡೆದ ಈ ನಿಶಸೀಕರಣ ಕಾಯಿದೆಯ ಪರಿಣಾಮ ಇಲ್ಲಿ ಉಲ್ಲೇಖವಾಗಿದೆ.
ವಿವರಣೆ: ಹಲಗಲಿಯಲ್ಲಿದ್ದವರು ಬೇಡ ಜನಾಂಗ, ಬೇಟೆ ಆಡಿ ಅವರ ಜೀವನ, ಹತಾರ ಇಲ್ಲದೇ ಜೀವನ ಸಾಗಿಸುವುದು ಅಸಾಧ್ಯ ಎಂದರಿತ ಹಲಗಲಿಯವರು ತಾವು ಈಗ ತಮ್ಮಲ್ಲಿರುವ ಹತಾರ ಒಪ್ಪಿಸಿದರೆ ಅವರ ಗುಲಾಮಗಿರಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ತಿಳಿದು ಆಯುಧಗಳನ್ನು ಕೊಡಲು ನಿರಾಕರಿಸಿದರು. ಆಗ ಕಂಪನಿ ಸರಕಾರ ಬಲವಂತದಿಂದ ಆಯುಧಗಳನ್ನು ಕಸಿದುಕೊಳ್ಳತೊಡಗಿದರು.
ವಿಶೇಷತೆ: ಲಾವಣಿಯ ರೂಪದಲ್ಲಿರುವ ಈ ವೀರಗಥೆ ಜನಪದ ಶೈಲಿಯಲ್ಲಿದ್ದು ಮನಮಿಡಿಯುತ್ತದೆ.
2) “ಜೀವ ಸತ್ತು ಹೋಗುವುದು ಗೊತ್ತ”
ಪ್ರಸ್ತಾವನೆ: ಪ್ರಸ್ತುತ ಈ ಸಾಲನ್ನು ಜಾನಪದ ಸಾಹಿತ್ಯ ದಿಂದ ಆರಿಸಲಾದ “ಹಲಗಲಿ ಬೇಡರು” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಹನುಮ, ಬಾಲ, ರಾಮ ಹಾಗೂ ಜಡಗ ತಾವು ಹತಾರ ಕೊಟ್ರೆ ಸತ್ತ ಹಾಗೆ ಎಂದು ಹತಾರಗಳನ್ನು ಕೊಟ್ಟರೆ ತಾವು ಕಂಪನಿಯವರ ಗುಲಾಮಗಿರಿ ಒಪ್ಪಿಕೊಂಡಂತಾಗುವುದು ಆದ್ದರಿಂದ ಹತ್ಯಾರ ಒಪ್ಪಿಸಬಾರದೆಂಬ ತೀರ್ಮಾನಕ್ಕೆ ಬಂದ ಸಂದರ್ಭ ಇದಾಗಿದೆ.
ವಿವರಣೆ: ಹಲಗಲಿಯ ಬೇಡರ ವೀರ ಯೋಧರು ‘ತಾವು ಒಂದು ವೇಳೆ ಹತಾರಗಳನ್ನು ಒಪ್ಪಿಸಿದರೆ ಅವರ ಗುಲಾಮಗಿರಿ ಒಪ್ಪಿಕೊಂಡು ಗುಲಾಮರಾದಂತೆ, ಅಲ್ಲದೆ ಗುಲಾಮರಾಗಿ ಬಾಳುವುದು ಅಸಾಧ್ಯ, ತಾವುಗಳು ಸತ್ತಂತೆ” ಎಂಬ ತೀರ್ಮಾನಕ್ಕೆ ಬಂದ ವಿವರ ಇದಾಗಿದೆ.
ವಿಶೇಷತೆ: ಹಲಗಲಿಯ ಬೇಡ ಯುವಕರು ಅನಕ್ಷಸ್ಥರಾದರೂ ಅವರಲ್ಲಿ ದೇಶ ಪ್ರೇಮದ ಕೊರತೆ ಇರಲಿಲ್ಲ ಎಂಬ ಸ್ವಾರಸ್ಯ ಇಲ್ಲಿದೆ. ಜಾನಪದ ಶೈಲಿ ಈ ಲಾವಣೆ ವೀರಗಥೆಯಾಗಿದೆ.
3) “ಹೊಡೆದರೊ ಗುಂಡ ಕರುಣ ಇಲ್ಲದ್ದಂಗ”
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಜಾನಪದ ಸಾಹಿತ್ಯ ದಿಂದ ಆರಿಸಲಾದ “ಹಲಗಲಿಯ ವೀರರು” ಎಂಬ * ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಹಲಗಲಿಯ ಬೇಡರೂ ನಿಶಸ್ತ್ರೀಕರಣ ಕಾಯಿದೆಯನ್ನು ನಿರಾಕರಿಸಿದಾಗ ಬ್ರಿಟಿಷ್ ಕಂಪನಿ ಸರ್ಕಾರವು ನಿರ್ದತೆಯಿಂದ ನಡೆದುಕೊಂಡ ರೀತಿ ಈ ವಾಕ್ಯದಲ್ಲಿ ಮೂಡಿಬಂದಿದೆ.
ವಿವರಣೆ : ಹಲಗಲಿಯ ವೀರ ಯೋಧರಾದ ಹನುಮ, ರಾಮ, ಬಾಲ, ಜಡಗ ತಮ್ಮ ಆಯುಧಗಳನ್ನು ಕೊಡಲು ಒಪ್ಪದಿದ್ದಾಗ ಬ್ರಿಟಿಷ್ ಕಂಪನಿ ಸರ್ಕಾರ ಅವರ ಬೆಂಬತ್ತಿ ಕರುಣ ಇಲ್ಲದೆ ಗುಂಡು ಹಾರಿಸಿ ಪ್ರಾಣವನ್ನೇ ತೆಗೆಯ ತೊಡಗಿದರು.
ವಿಶೇಷತೆ: * ಬ್ರಿಟಷ್ ಕಂಪನಿ ಸರ್ಕಾರದ ಕ್ರೂರತೆ ಇಲ್ಲಿ ಮೂಡಿ ಬಂದಿದೆ.
- ಜಾನಪದ ಶೈಲಿಯ ಈ ವೀರಗೀತೆ ಮನಮಿಡಿ ಯುವಂತೆ ಮೂಡಿ ಬಂದಿದೆ.
4) “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು”
ಪ್ರಸ್ತಾವನೆ: ಪ್ರಸ್ತುತ ಈ ಸಾಲನ್ನು ಜಾನಪದ ಸಾಹಿತ್ಯ ದಿಂದ ಆರಿಸಲಾದ “ಹಲಗಲಿಯ ಬೇಡರು” ‘ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ಪ್ರಸ್ತುತ ಈ ಸಾಲನ್ನು ಜಾನಪದ ಸಾಹಿತ್ಯವನ್ನು ಸಂಗ್ರಹಿಸಿದ ಡಾ. ಬಿ.ಎಸ್. ಗದ್ದರಿಮಠದವರು ‘ಹಲಗಲಿ ಬೇಡರ’ ದುರಂತಕಥೆಯನ್ನು ಕುರ್ತಕೋಟಿ ಕಲೇಶನ ದಯೆಯಿಂದ ಹಾಡಿರುವುದಾಗಿ ಹೇಳುವ ಸಂದರ್ಭದಲ್ಲಿ ಹೇಳಿದ್ದಾರೆ.
ವಿವರಣೆ: ಒಮ್ಮೆ ಹಲಗಲಿ ದೇಶಪ್ರೇಮಿಗಳಾದ ವೀರಯೋಧರಿಂದ ಕಂಗೊಳಿಸುತ್ತಿದ್ದ ಹಲಗಲಿ ಇಂದು ಸುಟ್ಟು ಬೂದಿಯಾಗಿ ದುರಂತ ಕಥೆಯ ವಿವರಣೆಯನ್ನು ಇಲ್ಲಿ ತಿಳಿಸಲಾಗಿದೆ. ಈ ಬಂಡ
ವಿಶೇಷತೆ: ಸ್ವಾತಂತ್ರ್ಯ ಪ್ರೇಮವನ್ನು ತೋರಿದ ಹಲಗಲಿಯ ಅನಕ್ಷರಸ್ಥ ಗುಂಪು ತಾವು ತೋರಿ ಮೆರೆದ ದೇಶಪ್ರೇಮ, ತ್ಯಾಗ ಜನಪದ ಸಾಹಿತ್ಯದಲ್ಲಿ ಧಾರ್ಮಿಕವಾಗಿ ಮೂಡಿ ಬಂದಿದೆ.
ಉ) ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಬಿಟ್ಟ ಸ್ಥಳದಲ್ಲಿ ಬರೆಯಿರಿ:
1) ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ__________
(ಕತೆ, ಗಾದೆ, ಒಗಟು, ಲಾವಣಿ)
2) ಹಲಗಲಿಯ ಜಿಲ್ಲಾ ಸ್ಥಾನವಾಗಿದ್ದ ಸ್ಥಳ__________
(ಬಾಗಲಕೋಟೆ, ಕಲಾದಗಿ, ಮುದೋಳ್, ಹೆಬಲಕ್)
3) ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ__________
(ಯುದ್ಧಶಾಸನ, ನಿಶ್ಯಸ್ತ್ರೀಕರಣ, ಕಬುಲಶಾಸನ, ಕುರ್ತಕೋಟಿಶಾಸನ)
4) ಲಾವಣಿಕಾರ ಅಂಕತಗೊಳಿಸಿರುವ ದೈವ___________
(ಕಲ್ಮೇಶ, ಹನುಮ, ರಾಮ, ಲಕ್ಷ್ಮೀಶ)
(5) “ವಿಲಾತಿ” ಪದದ ಸಮಾನಾರ್ಥಕ ಪದ_________
(ಆಯುಧ, ವಿಹಾರ, ವಿಲಂತಿ, ವಿಲಾಯಿತಿ)
ಉತ್ತರಗಳು :
1) – ಲಾವಣಿ,
2)- ಕಲಾದಗಿ,
3) – ನಿಶ್ಯಸ್ತ್ರೀಕರಣಶಾಸನ,
4) – ಕಲ್ಮೇಶ
5) – ವಿಲಾಯಿತಿ.
ಚಟುವಟಿಕೆ
ನೀಡಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ :
1. ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣೆ ಹಾಲಾ
ಉಪ್ಪು ಎಣ್ಣೆ ಅರಿಸಿಣ ಜೀರಗಿ ಅಕ್ಕಿ ಸಕ್ಕರಿ ಬೆಲ್ಲಾ
ಗಂಗಳ ಚೆರಗಿ ಮಂಗಳಸೂತ್ರ ಹೋದವು ಬೀಸುಕಲ್ಲಾ
ಹಾಳಾಗಿ ಹೋಯಿತು ಅತ್ತು ವರ್ಣಸಿ ಹೇಳಲಿ ನಾನೆಷ್ಟು ॥
2. ಸಿಕ್ಕದ್ದು ಗತೊಂಡು ಸರದ ನಿಂತರೋ ಊರಿಗೆ ಕೊಳ್ಳಿಕೊಟ್ಟು
ಬೂದಿ ಮಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಲಯೆಲ್ಲೊಳ್ಳಷ್ಟು
ಕಾಡಾದೆ ಹೋಯಿತೊ ಕೆಟ್ಟು ವರ್ಣಿ ಹೇಳಿದ ಕಂಡಷ್ಟು
ಕುರ್ತಕೋಡಿ ಕಲ್ವೇಶನ ದಯದಿಂದ ಹಾಡಿದೆನಣ್ಣಾ ಜನತಾ॥
ಇತರೆ ವಿಷಯಗಳು :
10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್