10th Standard Udatta Chintanegalu Kannada Notes Question Answer Guide Summery Extract Mcq Pdf Download Karnataka State Syllabus 2025, Kseeb Solutions For Class 10 Kannada Udatta Chintanegalu Notes Pdf,10th udatta chintanegalu question answer, ಉದಾತ್ತ ಚಿಂತನೆಗಳು ಪಾಠ ನೋಟ್ಸ್ Pdf, SSLC Udatta chintanegalu in kannada,10ನೇ ತರಗತಿ ಉದಾತ್ತ ಚಿಂತನೆಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, ಉದಾತ್ತ ಚಿಂತನೆಗಳು ಸಾರಾಂಶ, udatta chintanegalu kannada pdf, 10th kannada supplementary reading question answer,10th kannada supplementary reading chapter 3 notes.

10ನೇ ತರಗತಿ ಉದಾತ್ತ ಚಿಂತನೆಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು
ಅಭ್ಯಾಸ
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು-ಎರಡು ವಾಕ್ಯಗಳಲ್ಲಿ ಉತ್ತರಿಸಿ:-
1) ಕ್ರಿಯಾ ಸ್ವಾತಂತ್ರ್ಯ ಎಂದರೇನು?
ಕ್ರಿಯಾ ಸ್ವಾತಂತ್ರ್ಯವೆಂದರೆ, ತನಗೆ ಇಷ್ಟಬಂದ ಕೆಲಸ | ಮಾಡಲು ವ್ಯಕ್ತಿಗೆ ಅವಕಾಶವಿರುವುದು. ಅದು ಔಪಚಾರಿಕ ವಾಗಿದ್ದರೆ ಸಾಲದು, ವಾಸ್ತವಿಕವಾಗಿ ಕೂಡ ಜಾರಿಯಲ್ಲಿ ಇರಬೇಕು. ಅದು ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಇರುವ ಪರಿಣಾಮಕಾರಿಯಾದ ಸಾಮರ್ಥ್ಯ ವಾಗಬೇಕು.
2) ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು?
ರಾಜಕೀಯ ಸ್ವಾತಂತ್ರ್ಯದ ಮಹತ್ವವೆಂದರೆ ಶಾಸನಗಳನ್ನು ರಚಿಸುವುದರಲ್ಲಿ, ಸರಕಾರಗಳ ಸ್ಥಾಪನೆ, ವಿಸರ್ಜನೆಗಳಲ್ಲಿ, ಪಾಲು ಇರುವ ಹಕ್ಕಿನಲ್ಲಿ, ಸರಕಾರ ಇರುವುದು ಜನರಿಗಾಗಿ ಜೀವನ, ಸ್ವಾತಂತ್ರ್ಯ ಸಂತೋಷಾನ್ವೇಷಣೆಗಳನ್ನು ಒದಗಿಸಿ ಕೊಡುವ ಸಲುವಾಗಿ, ರಾಜಕೀಯವಾದ ಸಮಸ್ತ ಅಧಿಕಾರವೂ ಜನತೆಯಿಂದ ಬರುತ್ತದೆ.
3) ಅಂದವಾದ ಬರವಣಿಗೆಯ ಬಗ್ಗೆ ಗಾಂಧೀಜೀಯವರ ಅಭಿಪ್ರಾಯಾವೇನು?
ಅಂದವಾದ ಅಕ್ಷರ, ಒಳ್ಳೆಯ ಬರವಣಿಗೆ, ಶಿಕ್ಷಣದ ಅವಶ್ಯ ಅಂಶಗಳು, ಏಕೆಂದರೆ ಒಳ್ಳೆಯ ಬರವಣಿಗೆ ಉತ್ತಮ ಶಿಕ್ಷಣದ ಅವಶ್ಯವಾದ ಅಂಶವೆಂಬುದನ್ನು ಪ್ರತಿಯೊಬ್ಬರು ಅರಿಯಬೇಕೆಂಬುದಾಗಿ ಗಾಂಧೀಜೀಯವರು ತಿಳಿಸಿಕೊಟ್ಟಿದ್ದಾರೆ.
4) “ಅನ್ಟು ದಿಸ್ ಲಾಸ್ಟ್” ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು?
ರಸ್ಕಿನ್ “ಅನ್ಟು ದಿಸ್ಲಾಸ್ಟ್” ಎಂಬ ಕೃತಿಯು-ಗಾಂಧೀಯವರ ಬಾಳಿನಲ್ಲಿ ಪರಿಣಾಮಕಾರಿಯಾದ ಬದಲಾವಣೆಯು ಮೂಡಿತು. ಇವರ ಮನಸ್ಸನ್ನು ಆಕರ್ಷಿ ಸಿತು. ಈ ಕೃತಿಯನ್ನು ಗಾಂಧೀಜೀಯವರು “ಸರ್ವೋ ದಯ” ಎಂಬ ಹೆಸರಿನಿಂದ ಗುಜರಾತಿ ಭಾಷೆಗೆ ಅನುವಾದ ಮಾಡಿದರು.
5) ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗು ವುದು ಯಾವಾಗ?
ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗು ವುದು- “ದೇಶದ ಜನರು ಜಾಗೃತರಾದಾಗ, ಅಜ್ಞಾನದಿಂದ ನಿದ್ರಿಸುತ್ತಿರುವ ಜೀವ ಜಾಗೃತವಾಗಿ ಕಾರ್ಯೋನ್ಮುಖ ವಾದಾಗ, ಆತ್ಮಶಕ್ತಿ, ಆತ್ಮ ಧೈರ್ಯವನ್ನು ಬೆಳೆಸಿಕೊಂಡಾಗ ಎಂದು ಹೇಳಿದ್ದಾರೆ.
6) ಬಾಳಿನಲ್ಲಿ ತೃಪ್ತಿ ದೊರಕ ಬೇಕಾದರೆ ಏನು ಮಾಡ ಬೇಕೆಂಬುದು ವಿವೇಕಾನಂದರ ಅಭಿಪ್ರಾಯ?
ಬಾಳಿನಲ್ಲಿ ತೃಪ್ತಿದೊರೆಯ ಬೇಕಾದರೆ, “ ಆತ್ಮದ ಅನಂತ ಶಕ್ತಿಯನ್ನು ಭೌತಿಕ ಪ್ರಪಂಚದ ಮೇಲೆ ಬೀರಿದರೆ ಹಲವು ಭೌತಿಕ ಬೆಳವಣಿಗೆಗಳಾಗುವುದು. ಆಲೋಚನೆ ಮಾಡಿದರೆ ಬುದ್ಧಿ ತನ್ನ ಪರಾಕಾಷ್ಠೆಯನ್ನು ಮುಟ್ಟುವುದು. ಆದರ್ಶಕ್ಕಾಗಿ ಬಾಳಿದುಡಿದು ಮಡಿದರೆ ತೃಪ್ತಿಯ ಭಾವ ಸಿಗುತ್ತದೆ. ಎಂಬುದಾಗಿ ವಿವೇಕಾನಂದರು ಹೇಳಿದ್ದಾರೆ.