10th Standard Swatantrottara Bharatha Chapter Social Notes | 10ನೇ ತರಗತಿ ಸ್ವಾತಂತ್ರ್ಯೋತ್ತರ ಭಾರತ ಪಾಠದ ನೋಟ್ಸ್‌

Swatantrottara Bharatha

SSLC Social Science Swatantrottara Bharatha Chapter 19 Notes Question Answer Guide Mcq Pdf Download in Kannada Medium Karnataka State Syllabus 2025, 10ನೇ ತರಗತಿ ಸ್ವಾತಂತ್ರ್ಯೋತ್ತರ ಭಾರತ ಸಮಾಜ ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರಗಳು, 10th ಸ್ವಾತಂತ್ರ್ಯೋತ್ತರ ಭಾರತ ಪ್ರಶ್ನೋತ್ತರಗಳು,10th Class Swatantrottara Bharatha Lesson Notes,10th Social Science chapter 19 Question Answer, Kseeb Solutions for Class 10 Social science Chapter 19 Notes Kannada Medium, State Syllabus Class 10 Social Science 19 Lesson Key Answer,10th Std Social Lesson 19 Notes in Kannada

Swatantrottara Bharatha

1.ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ಕೊನೆಯ ಗವರ್ನರ್‌ ಜನರಲ್‌ ಮೌಂಟ್‌ ಬ್ಯಾಟನ್ ಆಗಿದ್ದನು.

2. ಭಾರತದ ಪ್ರಥಮ ಗೃಹ ಮಂತ್ರಿ ವಲ್ಲಭ ಬಾಯಿ ಪಟೇಲ್‌ ಆಗಿದ್ದರು.

3. ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ಡಾ. ಬಾಬು ರಾಜೇಂದ್ರ ಪ್ರಸಾದ್

3. ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ಸಾ.ಶ. 1963 ರಲ್ಲಿ ಸೇರಿತು.

4. ರಾಜ್ಯ ಪುನರ್ವಿಂಗಡಣಾ ಕಾನೂನು ಸಾ.ಶ. 1956 ರಲ್ಲಿ ಜಾರಿಗೆ ಬಂದಿತು.

1.ಭಾರತವು ಸ್ವಾತಂತ್ರ್ಯಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?

ಭಾರತದ ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಲಕ್ಷಾಂತರ ನಿರಾಶ್ರಿತರ ಸಮಸ್ಯೆ, ಕೋಮುಗಲಭೆಗಳು, ಸರ್ಕಾರದ ರಚನೆ, ದೇಶೀಯ ಸಂಸ್ಥಾನಗಳ ವಿಲೀಕರಣ, ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು.

2. ನಿರಾಶ್ರಿತರ ಸಮಸ್ಯೆಯನ್ನು ದೇಶವು ಹೇಗೆ ಎದುರಿಸಿತು?

ಭಾರತದಿಂದ ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಲಕ್ಷಾಂತರ ಜನ ತಮ್ಮ ತಮ್ಮ ಹುಟ್ಟಿದ ಊರುಗಳನ್ನು, ಬೆಳೆದ ಪರಿಸರವನ್ನು, ಆಸ್ತಿ-ಪಾಸ್ತಿಗಳನ್ನು, ಕಳೆದುಕೊಂಡು ತಮ್ಮದಲ್ಲದ ಪ್ರದೇಶಗಳಿಗೆ ವಲಸೆ ಹೋಗಬೇಕಾಯಿತು. ಈ ರೀತಿಯಾಗಿ ನಿರಾಶ್ರಿತರಾದ ಜನರಿಗೆ ವಸತಿ, ಉದ್ಯೋಗ, ಭೂಮಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ವಾತಾವರಣ ಎಲ್ಲವನ್ನೂ ನಿರ್ಮಿಸಿಕೊಡಬೇಕಾದ ಬೃಹತ್ ಜವಾಬ್ದಾರಿ ಸರ್ಕಾರದ ಮೇಲೆ ಬಿದ್ದಿತು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದವು.

3. ಪಾಂಡಿಚೇರಿಯನ್ನು ಫ್ರೆಂಚರಿಂದ ವಿಮುಕ್ತಗೊಳಿಸಿದ ರೀತಿಯನ್ನು ವಿವರಿಸಿ.

ಸ್ವಾತಂತ್ರಾನಂತರದಲ್ಲಿ ಫ್ರೆಂಚ್ ವಸಾಹತುಶಾಹಿಗಳು ಪಾಂಡಿಚೇರಿ, ಕಾರೈಕಲ್, ಮಾಹೆ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು. ಇವು ಭಾರತಕ್ಕೆ ಸೇರಬೇಕೆಂದು ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಸಾ.ಶ. 1954ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು. ಸಾ.ಶ. 1963ರಲ್ಲಿ ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು.

4. ಗೋವಾವನ್ನು ಪೋರ್ಚುಗೀಸರಿಂದ ಹೇಗೆ ಮುಕ್ತಗೊಳಿಸಲಾಯಿತು?

ಪೋರ್ಚುಗೀಸರ ವಸಾಹತು ಆಡಳಿತದಲ್ಲಿ ಮುಂದವರೆದ ಗೋವಾ, ಭಾರತಕ್ಕೆ ಕೇರಬೇಕೆಂದು ನಿರಂತರವಾದ ಚಳುವಳಿ ನಡೆಯಿತು. ಗೋವಾವನ್ನು ತೆರವುಗೊಳಿಸಬೇಕೆಂದು ಆದೇಶ ನೀಡಿದರೂ ಬಗ್ಗದ ಪೋರ್ಚುಗೀಸರು, ಆಫ್ರಿಕಾ ಮತ್ತು ಯುರೋಪಿನಿಂದ ಹೆಚ್ಚಿನ ಸೈನ್ಯವನ್ನು ತರಿಸಿಕೊಂಡು ಚಳುವಳಿಯನ್ನು ದಮನ ಮಾಡಿ ಅಧಿಕಾರವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಿದರು. ಸಾ.ಶ. 1955ರಲ್ಲಿ ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳು ಬಂದು ಗೋವಾದಿಂದ ವಸಾಹತುಶಾಹಿಗಳು ತೊಲಗಬೇಕೆಂದು ವಿಮೋಚನಾ ಹೋರಾಟ ಪ್ರಾರಂಭಿಸಿದರು. ಸಾ.ಶ. 1961ರಲ್ಲಿ ಭಾರತದ ಸೈನ್ಯ ಮಧ್ಯಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು. ಸಾ.ಶ. 1987 ರವರೆಗೂ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ನಂತರ ರಾಜ್ಯವಾಯಿತು.

5. 1953ರಲ್ಲಿ ಭಾರತ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗ ವನ್ನು ಏಕೆ ರಚಿಸಿತು?

ಭಾರತ ಸ್ವಾತಂತ್ರ್ಯಗೊಂಡ ನಂತರ ಕಂಡುಬಂದ ಪ್ರಜಾಸತ್ತಾತ್ಮಕ ಚಳವಳಿಯೆಂದರೆ ಭಾಷಾವಾರು ರಾಜ್ಯಗಳಿಗಾಗಿನ ಹೋರಾಟ. ಜನರಿಗೆ ಉತ್ತಮವಾದ ಆಡಳಿತವನ್ನು ನೀಡಲು ಜನರ ಭಾಷೆಯನ್ನು ಆಧರಿಸಿದ ಭೌಗೋಳಿಕ ಗಡಿಗಳನ್ನು ಗುರುತಿಸಬೇಕೆಂಬ ಒತ್ತಾಯ ತೀವ್ರವಾಗಿತ್ತು. ಬ್ರಿಟಿಷ್ ಮತ್ತು ದೇಶೀಯ ಸಂಸ್ಥಾನಗಳೆರಡರಲ್ಲೂ ಜನರಾಡುವ ಭಾಷೆಯಲ್ಲಿ ಆಡಳಿತ ನಡೆಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾಷಾವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವ್ರವಾಗಿತ್ತು. ವಿಶಾಲಾಂಧ್ರ ರಾಜ್ಯ ರಚಿಸಬೇಕೆಂದು ಂಧ್ರಮಹಾಸಭಾದ ನೇತೃತ್ವದಲ್ಲಿ ಸಾ.ಶ. 1952ರಲ್ಲಿ ಪೊಟ್ಟಿ ಶ್ರೀರಾಮುಲು 58 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು. ಇದರ ಪರಿಣಾಮವಾಗಿ. ಸಾ.ಶ. 1953ರಲ್ಲಿ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು.

1.ಉಕ್ಕಿನ ಮನುಷ್ಯ ಎಂದು ಖ್ಯಾತಿಯಾಗಿದ್ದವರು:

ಎ) ಜವಾಹರಲಾಲ್ ನೆಹರು

ಬಿ) ಎಸ್.ಆರ್.ಕಂಠಿ

ಡಿ) ಪೊಟ್ಟಿಶ್ರೀರಾಮುಲು

2. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಇದ್ದ ಸಂಸ್ಥಾನಗಳು:

ಬಿ) 438

ಸಿ) 502

ಡಿ) 490

3. ಮೊದಲ ಭಾಷಾವಾರು ರಾಜ್ಯ:

ಎ) ಗೋವಾ

ಬಿ) ಪಾಂಡಿಚೇರಿ

ಸಿ) ಮೈಸೂರು

4. ಭಾರತದ ಸೈನ್ಯ ಗೋವಾವನ್ನು ರಲ್ಲಿ ವಶಪಡಿಸಿಕೊಂಡಿತು.

ಬಿ) 1955

ಸಿ) 1987

ಡಿ) 1963

5. ಪಾಕ್ ಆಕ್ರಮಿತ ಪ್ರದೇಶ:

ಎ) ಕಾಶ್ಮೀರದ ಈಶಾನ್ಯ ಪ್ರದೇಶ

ಸಿ) ಕಾಶ್ಮೀರದ ಉತ್ತರ ಪ್ರದೇಶ

ಡಿ) ಕಾಶ್ಮೀರದ ದಕ್ಷಿಣ ಪ್ರದೇಶ

1.ಆಂಧ್ರಮಹಾಸಭದ ನೇತೃತ್ವದಲ್ಲಿ 58 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದವರು ಪೊಟ್ಟಿ ಶ್ರೀರಾಮುಲು

2. ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು

3. ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ಕಾಶ್ಮೀರದ ವಿಲೀನವು ವಿಶಿಷ್ಟವಾಗಿದೆ.

4. ನಿಜಾಮನ ಕ್ರೂರಪಡೆ ರಜಾಕರ

5. ಜುನಾಗಡ್ 1949 ರಲ್ಲಿ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು.

6. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮೌಂಟ್ ಬ್ಯಾಟನ್ ಭಾರತದ ಗವರ್ನರು ಜನರಲ್ ಆದರು.

7. ರಾಜಧನ ಮತ್ತಿತರ ಸ್ಥಾನಮಾನಗಳನ್ನು ಸರ್ಕಾರ 1969 ರಲ್ಲಿ ರದ್ದುಗೊಳಿಸಿತು.

1.ಜುನಾಗಢದ ನವಾಬನು ರಾಜ್ಯ ಬಿಟ್ಟು ಪಲಾಯನ ಮಾಡಲು ಕಾರಣವೇನು?

ಜುನಾಗಢದ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ಥಾನಕ್ಕೆ ಸೇರಿಸಲು ಇಚ್ಚಿಸಿದ್ದನು. ಆಗ ಪ್ರಜೆಗಳು ಆತನ ವಿರುದ್ಧ ಬೀದಿಗಿಳಿದರು. ಇದನ್ನು ಎದುರಿಸಲಾರದೆ ನವಾಬನು ರಾಜ್ಯ ಬಿಟ್ಟು ಪಲಾಯನ ಮಾಡಿದನು.

2. ಹೈದರಾಬಾದ್ ಸಂಸ್ಥಾನವನ್ನು ಭಾರತದೊಂದಿಗೆ ಹೇಗೆ ವಿಲೀನಗೊಳಿಸಲಾಯಿತು?

ಹೈದರಾಬಾದ್ ಸಂಸ್ಥಾನವು ನಿಜಾಮನ ಅಧೀನದಲ್ಲಿತ್ತು. ಈತನು ಸ್ವತಂತ್ರವಾಗುಳಿಯುವ ಉದ್ದೇಶದಿಂದ ಭಾರತಕ್ಕೆ ಸೇರಲು ನಿರಾಕರಿಸಿದನು. ಇದೇ ಸಂದರ್ಭದಲ್ಲಿ ಕಮುನಿಸ್ಟರ ನೇತೃತ್ವದಲ್ಲಿ ತೆಲಂಗಾಣ ರೈತರ ಸಶಸ್ತ್ರ ಹೋರಾಟವು ನಿಜಾಮ ಮತ್ತು ಜಮೀನ್ದಾರರ ವಿರುದ್ಧ ನಡೆಯುತ್ತಿತ್ತು. ನಿಜಾಮನ ಕ್ರೂರ ಪಡೆಯಾದ ರಜಾಕರ ವಿರುದ್ಧ ಜನತೆಯಲ್ಲಿ ವ್ಯಾಪಕ ಪ್ರತಿರೋಧವಿತ್ತು. ಆಗ ಭಾರತ ಸರ್ಕಾರ ಸೈನ್ಯವನ್ನು ಕಳುಹಿಸಿ ನಿಜಾಮನನ್ನು ಸೋಲಿಸಿ ಹೈದರಾಬಾದ್ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು.

3. ಬ್ರಿಟಿಷರು ಸಂಸ್ಥಾನಗಳ ಮುಂದೆ ತೆರೆದಿಟ್ಟ ಮೂರು ಅವಕಾಶಗಳು ಯಾವುವು?

  • ಭಾರತ ಒಕ್ಕೂಟಕ್ಕೆ ಸೇರಬಹುದು
  • ಪಾಕಿಸ್ತಾನಕ್ಕೆ ಸೇರಬಹುದು
  • ಯಾವುದೇ ದೇಶಕ್ಕೂ ಸೇರ್ಪಡೆಯಾಗದೆ ಸ್ವತಂತ್ರರಾಗಿರಬಹುದು.

4. ಸಂಸ್ಥಾನಗಳು ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ತೀವ್ರ ಪ್ರತಿರೋಧ ವನ್ನು ತೋರಿದ ಸಂಸ್ಥಾನಗಳು ಯಾವುವು?

ಸಂಸ್ಥಾನಗಳು ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಜುನಾಗಡ್, ಹೈದರಾಬಾದ್ ಮತ್ತು ಜಮ್ಮು ಕಾಶ್ಮೀರ ಸಂಸ್ಥಾನಗಳು ತೀವ್ರ ಪ್ರತಿರೋಧವನ್ನು ತೋರಿದವು.

5. ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳ ಅಸ್ಥಿತ್ವಕ್ಕೆ ಕಾರವೇನು?

ಮೌಂಟ್‌ ಬ್ಯಾಟನ್ ವರದಿಯನ್ನು ಆಧರಿಸಿ 1947ರ ಜೂನ್ 3 ರಂದು ಬ್ರಿಟಿಷ್ ಸರ್ಕಾರ ಮಾಡಿದ ಘೋಷಣೆಯು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳ ಅಸ್ಥಿತ್ವಕ್ಕೆ ಕಾರಣವಾಯಿತು.

6. ಭಾಷಾವಾರು ಪ್ರಾಂತ್ಯಗಳ ವಿಂಗಡಣಾ ಕ್ರಮವನ್ನು ಕುರಿತು ಬರೆಯಿರಿ.

ದೇಶಾದ್ಯಂತ ಭಾಷಾವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವ್ರವಾದಾಗ 1953 ರಲ್ಲಿ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು. ಇದರಲ್ಲಿ ಫಜಲ್ ಅಲಿ ಅಧ್ಯಕ್ಷರಾಗಿ ಕೆ.ಎಂ. ಫಣಿಕ್ಕರ್ ಮತ್ತು ಹೆಚ್.ಎನ್.ಕುಂಜ್ರು ಸದಸ್ಯರಾಗಿದ್ದರು. ಮೊದಲ ಭಾಷಾವಾರು ರಾಜ್ಯವಾಗಿ 1953 ರಲ್ಲಿ ಆಂಧ್ರಪ್ರದೇಶ ರಚನೆಯಾಯಿತು. ಈ ಆಯೋಗದ ವರದಿಯಂತೆ 1956 ರಲ್ಲಿ ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದಿತು. ಈ ಕಾನೂನ ಪ್ರಕಾರ ದೇಶದಲ್ಲಿ 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ರಚನೆಯಾದವು. ಕನ್ನಡ ಮಾತನಾಡುವ ಪ್ರದೇಶಗಳು ಹಲವು ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದವು. ಇವೆಲ್ಲವನ್ನೂ ಒಟ್ಟುಗೂಡಿಸುವ ಬೇಡಿಕೆಯಿಟ್ಟು “ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು” ನೇತೃತ್ವದಲ್ಲಿ ಚಳುವಳಿ ನಡೆಯಿತು. ಅಂತಿಮವಾಗಿ 1956 ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದರು ಮೈಸೂರು ರಾಜ್ಯವನ್ನು ಉದ್ಘಾಟಿಸಿದರು.

7. ರಾಜಾ ಹರಿಸಿಂಗನು ಭಾರತ ಸರ್ಕಾರದ ಸಹಾಯವನ್ನು ಕೋರಲು ಕಾರಣವೇನು?

ಜಮ್ಮು ಕಾಶ್ಮೀರವು ಭಾರತಕ್ಕೆ ಸೇರಿ ಬಿಡಬಹುದೆಂದು ಆತಂಕದಿಂದ ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರನ್ನು ದಾಳಿ ಮಾಡುವಂತೆ ಪ್ರಚೋದಿಸಿತು. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ದುಡಿದ ಷೇಕ್ ಅಬ್ದುಲ್ಲಾನ ನ್ಯಾಷನಲ್ ಕಾನ್ಸೆರೆನ್ಸ್ ಪಕ್ಷವು ಧಾರ್ಮಿಕ ಸಂವಿಧಾನವನ್ನು ಹೊಂದಿರುವ ಪಾಕಿಸ್ತಾನಕ್ಕಿಂತ ಪ್ರಜಾಪ್ರಭುತ್ವ ಗಣರಾಜ್ಯ ಸಂವಿಧಾನವನ್ನು ಹೊಂದಿರುವ ಭಾರತದೊಂದಿಗೆ ಗುರುತಿಸಿಕೊಳ್ಳುವುದೇ ಉತ್ತಮವೆಂದು ಹೋರಾಟ ನಡೆಸಿತು. ಇಂತಹದೊಂದು ಒತ್ತಡದಿಂದಾಗಿ ರಾಜಾ ಹರಿಸಿಂಗನು ಭಾರತ ಸರ್ಕಾರದ ಸಹಾಯವನ್ನು ಕೋರಿದನು.

  • ಮೌಂಟ್‌ ಬ್ಯಾಟನ್ ವರದಿಯನ್ನು ಆಧರಿಸಿ ಸಾ.ಶ. 1947ರ ಜೂನ್ 3 ರಂದು ಬ್ರಿಟಿಷ್ ಸರ್ಕಾರ ಮಾಡಿದ ಘೋಷಣೆಯು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ ರಾಷ್ಟ್ರಗಳ ಅಸ್ಥಿತ್ವಕ್ಕೆ ಕಾರಣವಾಯಿತು.
  • ಭಾರತದ ಸ್ವಾತಂತ್ರ್ಯದ ಜೊತೆಯಲ್ಲೇ ನಿರಾಶ್ರಿತರ ಸಮಸ್ಯೆ. ಕೋಮುಗಲಭೆಗಳು. ಸರ್ಕಾರದ ರಚನೆ, ದೇಶೀಯ ಸಂಸ್ಥಾನಗಳ ವಿಲೀನೀಕರಣ, ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ನಿವಾರಿಸಬೇಕಿತ್ತು.
  • ಸಾ.ಶ. 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ತಾತ್ಕಾಲಿಕ ಸರ್ಕಾರ ರಚನೆಯಾಯಿತು.
  • ಮೌಂಟ್ ಬ್ಯಾಟನ್‌ರವರು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆದರು.
  • ಜವಾಹರಲಾಲ್ ನೆಹರುರವರು ಭಾರತದ ಪ್ರಧಾನ ಮಂತ್ರಿಯಾಗಿ ಸರ್ಕಾರವನ್ನು ರಚಿಸಿದರು.
  • ಸಾ.ಶ. 1950 ರ ಜನವರಿ 26 ರಂದು ಭಾರತದ ಸಂವಿಧಾನ ಜಾರಿಯಾಯಿತು.
  • ಡಾ. ಬಾಬು ರಾಜೇಂದ್ರ ಪ್ರಸಾದ್ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರಾದರು.
  • ಸಂವಿಧಾನವು ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಿತು. ಮುಂದೆ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು ಸೇರಿಸಲಾಯಿತು.
  • ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಖ್ಯಾನಗಳಿದ್ದವು.
  • ಭಾರತ ಸರ್ಕಾರ ಎಲ್ಲಾ ದೇಶೀಯ ಸಂಸ್ಥಾನಗಳನ್ನು ಭಾತಕ ಒಕ್ಕೋಟಕ್ಕೆ
  • ಸಂಸ್ಥಾನಗಳು ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಜುನಾಗಡ್, ಜೈದನಾನಾಲ್ ಮತ್ತು ಜಮ್ಮು ಕಾಶ್ಮೀರ ತೀವ್ರ ಪ್ರತಿರೋಧವನ್ನು ತೋರಿದವು.
  • ಉಕ್ಕಿನ ಮನುಷ್ಯ ಎಂದು ಖ್ಯಾತಿಯಾಗಿದ್ದ ಭಾರತದ ಪ್ರಥಮ ಗೃಹಮಂತ್ರಿ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯವನ್ನು ಯಶಸ್ವಿಯುಗಿ ನಿರ್ವಹಿಸಲಾಯಿತು.
  • ಸಾ.ಶ. 1949ರಲ್ಲಿ ಜುನಾಗಡ್ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು.
  • ಸಾ.ಶ. 1948ರಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು.
  • ಕೆಲವು ಷರತ್ತುಗಳೊಂದಿಗೆ ಕಾಶ್ಮೀರ ಭಾರತದೊಂದಿಗೆ ವಿಲೀನವಾಯಿತು. ಆದರೆ, ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ವಶದಲ್ಲಿ ಉಳಿಯಿತು.
  • ಫ್ರೆಂಚರ ವಶದಲ್ಲಿದ್ದ ಪಾಂಡಿಚೇರಿ, ಕಾರೈಕಲ್, ಮಾಹೆ ಮತ್ತು ಚಂದ್ರನಗರಗಳು ಸಾ.ಶ. 1954ರಲ್ಲಿ ಭಾರತಕ್ಕೆ ಸೇರ್ಪಡೆಗೊಂಡವು.
  • ಸಾ.ಶ. 1963ರಲ್ಲಿ ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು.
  • ಸಾ.ಶ. 1987 ರವರೆಗೂ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ಸಂತರ ರಾಜ್ಯವಾಯಿತು.
  • ಸಾ.ಶ. 1956 ರಲ್ಲಿ ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದಿತು. ಈ ಕಾನೂನಿನ ಪ್ರಕಾರ ದೇಶದಲ್ಲಿ 14 ರಾಜ್ಯಗಳು ಮತ್ತು 6 ಕೇದ್ರಾಡಳಿತ ಪ್ರದೇಶಗಳು ರಚನೆಯಾದವು.
  • ಸಾ.ಶ. 1956 ನವೆಂಬರ್ 1 ರಂದು ಮೈಸೂರು ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಮುಂದೆ ಸಾ.ಶ. 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
  • ಇಂದು ಭಾರತದಲ್ಲಿ ಒಟ್ಟು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಒಂದು ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶವಾಗಿದೆ.

ಇತರೆ ವಿಷಯಗಳು :

ಸ್ವಾತಂತ್ರ್ಯ ಹೋರಾಟ ಪಾಠದ ನೋಟ್ಸ್‌

ಸ್ವಾತಂತ್ರ್ಯೋತ್ತರ ಭಾರತ ಪಾಠದ ನೋಟ್ಸ್

‌10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *