10th Standard Agnibuti Vayubhuthiyara Kathe Kannada Notes | 10ನೇ ತರಗತಿ ಅಗ್ನಿಭೂತಿ ವಾಯುಭೂತಿಯರ ಕಥೆ ಕನ್ನಡ ನೋಟ್ಸ್

Agnibuti Vayubhuthiyara Kathe

10th Standard Agnibuti Vayubhuthiyara Kathe Kannada Notes Question Answer Guide Summery Extract Mcq Pdf Download in Kannada Medium Karnataka State Syllabus 2025 10th Kannada Notes 10th class Agnibuti Vayubhuthiyara Kathe notes pdf, Agnibuti Vayubhuthiyara Kathe Question Answer in Kannada, Agnibuti Vayubhuthiyara Kathe Kannada Kseeb Solutions For Class 10 Kannada, Siri Kannada Text Book Class 10 Solutions Chapter 8 Agnibuti Vayubhuthiyara Kathe, 10ನೇ ತರಗತಿ ಅಗ್ನಿಭೂತಿ ವಾಯುಭೂತಿಯರ ಕಥೆ ನೋಟ್ಸ್‌ ಪ್ರಶ್ನೋತ್ತರಗಳು. ಅಗ್ನಿಭೂತಿ ವಾಯುಭೂತಿ ಕಥೆ question answer ಅಗ್ನಿಭೂತಿ ವಾಯುಭೂತಿ ಕಥೆ notes

ಕನ್ನಡದ ಪ್ರಥಮ ಗದ್ಯಕೃತಿ ‘ವಡ್ಡಾರಾಧನೆ’ಯನ್ನು ರಚಿಸಿದವರು ಶಿವಕೋಟ್ಯಾಚಾರ್ಯರು. ಶ್ರೀಯುತರು ೧೦ನೇ ಶತಮಾನದವರು, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕೋಗಳಿ ನಾಡಿನವರು. ಹಿಂದೆ ಈ ಕೋಗಳಿ ನಾಡು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಲ್ಲೂಕಿನಲ್ಲಿತ್ತು. ವಡ್ಡಾರಾಧನೆಯು ಜೈನ ಧಾರ್ಮಿಕ ಕಥೆಗಳ ಸಂಗ್ರಹವಾಗಿದ್ದು ಇದರಲ್ಲಿ ೧೯ ಕಥೆಗಳಿವೆ. ಈ ಕಥೆಗಳ ನಾಯಕರೆಲ್ಲ ಧರ್ಮವೀರರು. ಕೆಲವರು ಮೋಕ್ಷವನ್ನು ಸಂಪಾದಿಸಿ ಕೊಳ್ಳುತ್ತಾರೆ. ಕೆಲವರು ಮೋಕ್ಷಕ್ಕೆ ನೆರೆಮನೆಯಾದ ಸರ್ವಾರ್ಥ ಸಿದ್ದಿ ಎಂಬ ಸ್ವರ್ಗಕ್ಕೆ ಹೋಗುತ್ತಾರೆ. ಪುಣ್ಯ ಪಾಪ ರುಪವಾದ ಕರ್ಮಕ್ಷಯದಿಂದ ಸಿದ್ದಿಗಳು ಉಂಟಾಗುತ್ತವೆ. ಕರ್ಮ ಕ್ಷಯವು ತಪಸ್ಸಿನಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಈ ಕಥೆಗಳು ಸಾರುತ್ತವೆ.

1) ಅತ್ತೆ = ಇಷ್ಟ, ಪ್ರೀತಿ13) ಪಸರ = ಸಲುಗೆ
2) ಉರ್ಕು = ದರ್ಪ14) ಪ್ರತಿಪತ್ತಿ = ಗೌರವ
3) ಉಬ್ಬೆಗ = ದುಃಖ ಚಿಂತೆ15) ಬಿಚ್ಚಳಿಸು = ಹೊಗಳು
4) ಒಸೆ = ಅನುಗ್ರಹಿಸು16) ವರಿಸು = ಬರಮಾಡು
5) ಆದಮಾನಮ್ = ವಿಶೇಷವಾಗಿ17) ಪೊಡಮಟ್ಟು = ನಮಸ್ಕರಿಸಿ
6) ಉಪಶ್ಲೋಕಿಸಿ = ಹೊಗಳಿ18) ಬಿಯ (ವ್ಯಯ) = ವೆಚ್ಚ
7) ಎಲೆಯಿಸು = ಸುರಿಸು19) ಪಲಂಬರ್ = ಹಲವರು
8) ಓಜ = ಉಪಾದ್ಯಾಯ20) ಕಟೆ = ಸಾವು
9) ಕತಿಪಯ = ಕೆಲವು, ಹಲವು21) ತೀವಿ – ತುಂಬಿ
10) ತಂಬುಲ = ತಾಂಬುಲ22) ದಾಯಿಗ = ದಾಯಾದಿ
11) ತುಟೆಲ್= ನಮಸ್ಕಾರ23) ಸಂಬಳ = ಬುತ್ತಿ
12) ಪರಾಯಣ = ತತ್ಪರ24) ಬೈಕಂದಿರಿ = ಭಿಕ್ಷೆಗಾಗಿ ಸುತ್ತು

1) ಸಪ್ತ ವ್ಯಸನಗಳು ಜೂಜು, ಮಧ್ಯಪಾನ, ಕಳ್ಳತನ, ಬೇಟೆ, ದುರ್ವಾಕ್ಯ, ಧನ ದುರುಪಯೋಗ, ಪರಸ್ತ್ರೀ ವ್ಯಾಮೋಹಗಳೆಂಬ ಏಳು ವ್ಯಸನಗಳು.

2) ಆರು ಅಂಗಗಳು – ಜ್ಯೋತಿಷ್ಯ, ಕಲ್ಪ, ಶಿಕ್ಷಾ, ನಿರುಕ್ತ, ವ್ಯಾಕರಣ, ಛಂದಸ್ಸು, ಎಂಬ ವೇದದ ಆರು ಅಂಗಗಳು.

3) ಸಾಮುದ್ರಿಕ – ಅಂಗೈರೇಖೆ ನೋಡಿ ಭವಿಷ್ಯ ಹೇಳುವ ಶಾಸ್ತ್ರ

4) ಶಾಲಿಹೋತ್ರ – ಒಬ್ಬ ಋಷಿ, ಅವರು ಬರೆದ ಅಶ್ವಶಾಸ್ತ್ರ.

5) ಪಾಳಕಾಪ್ಯಂ – ಗಜಶಾಸ್ತ್ರ

6) ನ್ಯಾಯ ವಿಸ್ತಾರ – ತರ್ಕಶಾಸ್ತ್ರ

7) ಸುಶ್ರುತ – ಪ್ರಾಚೀನ ಭಾರತದ ಶಸ್ತ್ರವೈದ್ಯ. ಇವರು ಸುಶ್ರುತ ಸಂಹಿತವೆಂಬ ವೈದ್ಯಶಾಸ್ತ್ರ ಮತ್ತು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಗ್ರಂಥ ರಚಸಿದ್ದಾರೆ.

8) ಚರಕ – ಚರಕ ಸಂಹಿತೆಯೆಂಬ ಆರ್ಯವೇ್ರದ ಗ್ರಂಥದ ಕತೃು.

1) ಕೌಸಂಬಿಯ ಅರಸ ಯಾರು?

ಅತಿಬಳನೆಂಬುವನು ಕೌಸಂಬಿಯ ಅರಸನಾಗಿದ್ದರು.

2) ಸೋಮಶರ್ಮ – ಕಾಶ್ಯಪಿಯರ ಮಕ್ಕಳ ಹೆಸರೇನು?

ಅಗ್ನಿಭೂತಿ, – ವಾಯುಭೂತಿ ಎಂಬುವರು ಸೋಮಶರ್ಮ ಹಾಗೂ ಕಾಶ್ಯಪಿಯರ ಮಕ್ಕಳು.

3) ಕಾಶ್ಯಪಿ, ವಿದ್ಯಾಭ್ಯಾಸಕ್ಕಾಗಿ ತನ್ನ ಮಕ್ಕಳನ್ನು ಯಾರ ಬಳಿಗೆ ಕಳುಹಿಸಿದಳು?

ಕಾಶ್ಯಪಿ, ವಿದ್ಯಾಭ್ಯಾಸಕ್ಕಾಗಿ ತನ್ನ ಮಕ್ಕಳನ್ನು ಮಗಧೆಯ ನಾಡಿನಲ್ಲಿರುವ ರಾಜಗೃಹ ಎಂಬ ಪಟ್ಟಣದ ಸುಬಲ ರಾಜನ ಮಂತ್ರಿಯಾಗಿದ್ದ ತನ್ನ ಅಣ್ಣನಾದ ಸೂರ್ಯ ಮಿತ್ರನ ಬಳಿಗೆ ಕಳುಹಿಸಿದನು.

4) ಸೂರ್ಯಮಿತ್ರನು ತನಗೆ ಕಾಶ್ಯಪಿ ಎಂಬ ತಂಗಿಯಿಲ್ಲ ಎಂದು ಹೇಳುಲು ಕಾರಣವೇನು?

ಅಗ್ನಿಭೂತಿ – ವಾಯುಭೂತಿಯವರ ಬಗ್ಗೆ, ಕಾಶ್ಯಪಿ ಬರೆದ ಪತ್ರವನ್ನು ಓದಿ ಅವರ ಬಗ್ಗೆ ತಿಳಿದುಕೊಂಡಿದ್ದನು. ಇನ್ನು ತಾನು ಇವರಿಗೆ ಸಲುಗೆ ಕೊಟ್ಟರೆ ಇವರು ಹಿಂದಿನಂತೆ ಗರ್ವಿಷ್ಟರಾಗಿ ಹಾಳಾಗುವರು ಎಂದು ಮನಸ್ಸಿನಲ್ಲಿ ತೀರ್ಮಾನಿಸಿ ತನಗೆ ಕಾಶ್ಯಪಿ ಎಂಬ ತಂಗಿಯಿಲ್ಲ ಎಂದು ಹೇಳಿದನು.

5) ಪಂಡಿತರಾದ ಅಗ್ನಿಭೂತಿ – ವಾಯುಭೂತಿಯವರಿಗೆ ದೊರೆತ ಪದವಿ ಯಾವುದು?

ಪಂಡಿತರಾದ ಅಗ್ನಿಭೂತಿ – ವಾಯುಭೂತಿಯರಿಗೆ ಮಂತ್ರಿಸ್ಥಾನ ದೊರೆಯಿತು.

1) ರಾಜಸಭೆಯಲ್ಲಿ ಅಗ್ನಿಭೂತಿ ವಾಯುಭೂತಿಯವರನ್ನು ಮೂರ್ಖರೆಂದು ತೀರ್ಮಾನಿಸಿದ್ದೇಕೆ?

ರಾಜಸಭೆಯಲ್ಲಿ ಅಗ್ನಿಭೂತಿ-ವಾಯುಭೂತಿಯರನ್ನು ರಾಜಸಭೆಗೆ ಕರೆಸಿ “ನೀವು ಯಾವ ವಿದ್ಯೆಗಳನ್ನು ಬಲ್ಲಿರಿ?” ಎಂದು ಕೇಳಿದಾಗ, ಇವರಿಬ್ಬರು, ಯಾವ ಉತ್ತರವನ್ನು ಕೊಡದೆ ತಲೆತಗ್ಗಿಸಿ ಕಣ್ಣೀರನ್ನು ತುಂಬಿ ನಾಚಿಕೆಯಿಂದ ನೆಲದ ಮೇಲೆ ಕಾಲ ಬೆರಳಿನಿಂದ ಗೀರ ತೊಡಗಿದರು. ಸಭೆಯಲ್ಲಿದ್ದವರು ಎಲ್ಲರು ರಾಜನಿಗೆ ಇವರು ತಿಳಿಗೇಡಿಗಳು, ವಿದ್ಯೆಗಳನ್ನು ತಿಳಿಯರು, ಸಪ್ತವ್ಯಸನಿಗಳ ಭಾದೆಗೆ ಒಳಗಾದವರು. ಆಗ ರಾಜನು ಕೂಡ ಇವರಿಬ್ಬರು ಮೂರ್ಖರೆಂದು ತೀರ್ಮಾನಿಸಿದನು.

2) ಅಗ್ನಿಭೂತಿ ವಾಯುಭೂತಿಯರು ಸೂಯ್ ಮಿತ್ರನಿಂದ ಕಲಿತ ವಿದ್ಯೆಗಳಾವುವು?

ವೇದದ ಆರು ಅಂಗಗಳಾದ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ, ಶಾಸ್ತ್ರಗಳನ್ನು ಧರ್ಮಶಾಸ್ತ್ರ, ತರ್ಕಶಾಸ್ತ್ರ, ವ್ಯಾಕರಣ, ಪ್ರಮಾಣ, ಅಲಂಕಾರಶಾಸ್ತ್ರ, ಶಬ್ದಕೋಶ, ಕಾವ್ಯನಾಟಕಗಳು, ಅರ್ಥಶಾಸ್ತ್ರ, ಸಾಮುತ್ರಿಕ ಶಾಸ್ತ್ರ, ಅಶ್ವಶಾಸ್ತ್ರ, ಗಜಶಾಸ್ತ್ರ, ವೈದ್ಯಶಾಸ್ತ್ರ ಮುಂತಾದ ಹಲವಾರು ವಿದ್ಯೆಗಳನ್ನು ಅಗ್ನಿಭೂತಿ ಹಾಗೂ ವಾಯುಭೂತಿ ಯರು ಸೂರ್ಯಮಿತ್ರನಿಂದ ಕಲಿತರು.

3) ಸೂರ್ಯಮಿತ್ರನು, ಅಗ್ನಿಭೂತಿ ವಾಯುಭೂತಿಯರಿಗೆ ವಿಧ್ಯಾಭ್ಯಾಸದ ನಂತರ ತಾನು ಅವರ ಮಾನವೆಂದು ಹೇಳಿಕೊಳ್ಳಲು ಕಾರಣವೇನು?

ಅಗ್ನಿಭೂತಿ – ವಾಯುಭೂತಿಯರು ಎಲ್ಲಾ ರೀತಿಯ ವಿದ್ಯೆಗಳನ್ನು ಕಲಿತ ನಂತರ ಅದರಲ್ಲಿದ್ದ ಗರ್ವ, ಅಹಂಕಾರವೆಲ್ಲಾ ದೂರವಾಗಿ ಸತ್ಯವನ್ನು ತಿಳಿದು ಕೊಳ್ಳುವಷ್ಟು ಯೋಗ್ಯತೆಯನ್ನು ಪಡೆದಿದ್ದಾದರಿಂದ ಇನ್ನು ಸತ್ಯವನ್ನು ಮರೆಮಾಚ ಬಾರದೆಂದು ಸೂರ್ಯಮಿತ್ರನು, ಅಗ್ನಿಭೂತಿ ವಾಯುಭೂತಿಯರಿಗೆ ತಾನು ಅವರ ಸೋದರ ಮಾವನೆಂದು, ಮೊದಲೇ ವಿಷಯ ತಿಳಿಸಿದ್ದರೆ ಎಲ್ಲಿ ಸೊಕಲ್ಲಾ ಹೆಚ್ಚಾಗಿತೆಂದು ಹೆದರು, ಅವರಿಬ್ಬರನ್ನು ಯೋಗ್ಯರನ್ನಾಗಿ ಮಾಡಿದ ನಂತರವಷ್ಟೇ ಸತ್ಯ ತಿಳಿಸ ಬೇಕೆಂದು ಕಾದಿದ್ದೆನು. ಆದ್ದರಿಂದ ವಿದ್ಯಾಭ್ಯಾಸದ ನಂತರ ತಾನೇ ಅವರ ಮಾವನೆಂದು ಹೇಳಿಕೊಂಡನು.

4) ಸೂರ್ಯಮಿತ್ರನು ಮಾವನೆಂದು ತಿಳಿದಾಗ ವಾಯುಭೂತಿಯ ಪ್ರತಿಕ್ರಿಯೆ ಏನು?

ವಾಯುಭೂತಿಗೆ ಸೂರ್ಯಮಿತ್ರನು ತನಗೆ ಮಾವನೆಂದು ಹೇಳಿದಾಗ, ಆತನ ಬಗ್ಗೆ ಬೇಸರ, ತಿರಸ್ಕಾರದ ಭಾವನೆ ಉಂಟಾಯಿತು. ತಮ್ಮಿಬ್ಬರನ್ನು ಏಳೆಂಟು ವರ್ಷಗಳವರೆಗೆ ತಮ್ಮನ್ನು ಶತ್ರುವೆಂದೇ ಭಾವಿಸಿದನು, ದಂಡಿಸಿದನೆಂದು ಆತನ ಮೇಲೆ ಕ್ರೋಧಭಾವನ್ನಿಟ್ಟು ಕೊಂಡನು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತಿ ವಾಕ್ಯಗಳಲ್ಲಿ ಉತ್ತರಿಸಿ:

1) ಸಪ್ತವ್ಯಸನಿಗಳಾಗಿದ್ದ ಅಗ್ನಿಭೂತಿ – ವಾಯುಭೂತಿಯರು ಪಂಡಿತರಾದುದು ಹೇಗೆ?

ಕೌಸಂಬಿ ರಾಜ್ಯದಲ್ಲಿ ಮಂತ್ರಿಯಾಗಿದ್ದ ಸುಶರ್ಮರ ಮಕ್ಕಳಾದ ಅಗ್ನಿಭೂತಿ – ವಾಯುಭೂತಿಯರು ತಂದೆ -ತಾಯಿಗಳ ಸಲಿಗೆಯಿಂದಾಗಿ ವಿದ್ಯೆ ಕಲಿಯದೆ. ಗರ್ವಿಷ್ಟರಾಗಿ, ತಾವು ಮಂತ್ರಿ ಮಕ್ಕಳೆಂಬ ಗರ್ವದಿಂದ ಮೆರೆದರು. ವೇದ ಮುಂತಾದ ಯಾವ ಶಾಸ್ತ್ರ-ಶಾಸ್ತ್ರಗಳ ನ್ನು ಕಲಿಯದೆ ತಂದೆ ಸಂಪಾದಿಸಿದ ಸಂಪತ್ತುನ್ನಲ್ಲ ವೆಚ್ಚ ಮಾಡುತ್ತಾ ಬೇಟೆ, ಜೂಜು, ಮಾಂಸ ಸೇವನೆ, ಮದ್ಯ ಪಾನ, ವೇಶ್ಯಾಗಮನ, ಕಳ್ಳತನ, ದುರ್ವಾಕ್ಯ ಎಂಬ ಸು ಪ್ತವ್ಯಸನಿಗಳಾದರು. ಹೀಗೆ ಹಲವು ಕಾಲ ಕಳೆದಾಗ ಇವರ ತಂದೆ ಮಂತ್ರಿ ಸುಶರ್ಮನು ತೀರಿಹೋದನು, ರಾಜನು ಇವರನ್ನು ಕರೆಸಿ, ದೂತರಿಂದ ಅವರಿಬ್ಬರಿಗೂ ಪೂರ್ಣಸ್ನಾನ ಮಾಡಿಸಿ ಒಳ್ಳೆಯ ಬಟ್ಟೆ, ಆಭರಣಗಳನ್ನು ತೊಡಿಸಿ ಊಟ ಮಾಡಿಸಿದನು. ನಂತರ ರಾಜಸಭೆಗೆ ಇವರನ್ನು (ಅಗ್ನಿಭೂತಿ-ವಾಯುಭೂತಿ ಇಬ್ಬರನ್ನೂ ಕರೆಸಿ ರಾಜನು, ನೀವು ಯಾವ ವಿದ್ಯೆಗಳನು ಗೀರ ತೊಡಗಿದರು.

ಆಗ ಸರ್ಭಿರಲ್ಲರೂ ಇವರು ಸಪ್ತವ್ಯಸನಿಗಳೆಂದು, ಇವರಿಗೆ ಯಾವ ವಿದ್ಯೆಗಳನ್ನು ತಿಳಿದಿಲ್ಲ ಎಂದಾಗ ರಾಜನು ಬೇಸರದಿಂದ ಅವರನ್ನು ಅಲ್ಲಿಂದ ಓಡಿಸಿಬಿಟ್ಟನು. ಆಗ ಅಗ್ನಿಭೂತಿ – ವಾಯುಭೂತಿಯರು ಪರಸ್ಪರ ತಾವು ಹರಕು ಬಟ್ಟೆ ತೊಟ್ಟು ಭಿಕ್ಷೆ ಬೇಡಿಯಾದರೂ ವಿದ್ಯೆ ಕಲಿಯಬೇಕೆಂಬ ತೀರ್ಮಾನಕ್ಕೆ ಬಂದರು. ತಮ್ಮ ತೀರ್ಮಾನವನ್ನು ತಮ್ಮ ತಾಯಿ ಕಾಶ್ಯಪಿಗೆ ತಿಳಿಸಿದರು. ಆಗ ಕಾಶ್ಯಪಿಯು – ಮಗಧೆಯ ರಾಜಗೃಹದಲ್ಲಿ ಸುಬಲ ರಾಜನ ಬಳಿ ತನ್ನ ಅಣ್ಣ ಸೂರ್ಯಮಿತ್ರನು ಮಂತ್ರಿಯಾಗಿರುವನು, ನಾನು ಆತನಿಗೆ ಪತ್ರವೊಂದು ಬರೆದು ಕೊಡುವೆ, ನೀವು ನಿಮ್ಮ ಮಾವನ ಬಳಿ ಇದ್ದು ವಿದ್ಯೆ

ಕಲಿಯಿರಿ ಎಂದು ಪತ್ರ ಬರೆದು ಕೊಟ್ಟಳು. ಇಬ್ಬರು ರಾಜಗೃಹಕ್ಕೆ ಬಂದು ತಾವು ಕೌಸಂಬಿಯಿಂದ ಬಂದಿರುವುದಾಗಿ, ಕೌಶಪಿಯ ಮಕ್ಕಳಾದ ಅಗ್ನಿಭೂತಿ -ವಾಯುಭೂತಿ ತಾಯಿ ತಮಗೆ ಪತ್ರ ಕೊಟ್ಟಿರುವುದಾಗಿ ಹೇಳಿಕೊಟ್ಟರು, ಸೂರ್ಯಮಿತ್ರನು ಆ ದೀರ್ಘ ಪತ್ರವನ್ನು ಓದಿ-ತಾನು ಈಗ ಇವರಿಗೆ ಮಾನವೆಂದು ಸಲಿಗೆ ಕೊಟ್ಟರೆ ಮತ್ತಷ್ಟು ಗರ್ವಿಷ್ಟರಾಗ ಬಹುದು, ಪುನಃ ವಿದ್ಯೆ ಕಲಿಯಲು ಯೋಗ್ಯವನ್ನು ಬಹುಶಃ ಕಳೆದು ಕೊಳ್ಳುವರು ಎಂದು ಯೋಚಿಸಿ ತನ್ನ ಹೆಸರು ಸೂರ್ಯಮಿತ್ರ ನಿಜ ಆದರೆ ನಿಮ್ಮ ಮಾವನಲ್ಲ, ವಿದ್ಯೆ ಕಲಿಯುವ ಉದ್ದೇಶದಿಂದ ನೀವು ಇಲ್ಲಿಗೆ ಬಂದಿದ್ದರೆ ಒಳ್ಳೆಯದು.

ಆದರೆ ಹರಕು ಬಟ್ಟೆ ಯುಟ್ಟು ಹಗಲೂ – ಇರುಳೂ ಎನ್ನದೆ ಅಲಸ್ಯ ಗೊಳ್ಳದೆ, ನಿಯಮಾನುಸಾರವಾಗಿ ಕಲಿಯಲು ನೀವು ಸಿದ್ದವಿರುವುದಾದರೆ ನಿಮಗೆ ವಿದ್ಯೆ ಕಲಿಸಬಹುದು ಎಂದು ಹೇಳಿದಾಗ, ಇಬ್ಬರೂ ಒಪ್ಪಿದರು. ಎಡೆಬಿಡದೆ ಏಳೆಂಟು ವರ್ಷಗಳಲ್ಲಿ ಎಲ್ಲಾ ರೀತಿಯ ಶಸ್ತ್ರ, ಶಾಸ್ತ್ರಗಳ ನ್ನು ಕಲಿತರು. ದೊಡ್ಡ ವಿದ್ವಾಂಸರು, ಪಂಡಿತರು ಆದರು. ಎಲ್ಲಾ ರೀತಿಯ ವಿದ್ಯೆಗಳನ್ನು ಕಲಿತು ಎಲ್ಲಾ ರೀತಿಯ ಯೋಗ್ಯತೆಯನ್ನು ಸಂಪಾದಿಸಿದರು.

2) ಸೂರ್ಯಮಿತ್ರನು ತನ್ನ ಮಾವನೆಂದು ತಿಳಿದಾಗ ಅಗ್ನಿಭೂತ – ವಾಯುಭೂತಿಯರಲ್ಲಿ ಮಾಡಿದ ಭಾವನೆಗಳೇದನು? ವಿವರಿಸಿ.

ಸೂರ್ಯಮಿತ್ರನ, ಅಗ್ನಿಭತ ವಾಯು ಭೂತಿಯರು ಎಲ್ಲಾ ರೀತಿ ವಿದ್ಯೆ -ಶಸ್ತ್ರ-ಶಾಸ್ತ್ರಗಳನ್ನು ಕ ಲಿತು ವಿದ್ಯೆಯನ್ನು ಸಂಪಾದಿಸಿದ ನಂತರ ತಾನೇ ಅವರ ಮಾವನೆಂದು ತಿಳಿಸಿದನು. ಸೊಕ್ಕಿನಿಂದ ಕೆಟ್ಟು ಹೋಗುವರೆಂದು ಭಾವಿಸಿ ಇಬ್ಬರನ್ನು ಯೋಗ್ಯರನ್ನಾಗಿ ಮಾಡುವ ಉದ್ದೇಶದಿಂದ ಸಲುಗೆ ಕೊಡದೆ ವಿಷಯ ಮುಚ್ಚಿಟ್ಟದ್ದೆ ಎಂದು ಹೇಳಿ ಇಬ್ಬರಿಗೂ ವಸ್ತ್ರ-ಆಭರಣಗಳನ್ನು ಕೊಟ್ಟನು. ಪ್ರಯಾಣಕ್ಕೆ ಸಿದ್ಧತೆಯನ್ನು ಮಾಡಿಸಿ ಪ್ರಯಾಣಕ್ಕೆ ಬೇಕಾಗುವ ಬುತ್ತಿಯನ್ನು ಕಟ್ಟಿಸಿಕೊಟ್ಟನು ಇದನ್ನೆಲ್ಲ ಕೇಳಿದ ಅಗ್ನಿಭೂತಿಯು “ಮಾವನು ನಮಗೆ ಸಲುಗೆ ಕೊಡದೆ ಇಬ್ಬರನ್ನು ಯೋಗ್ಯರನ್ನಾಗಿ ಮಾಡಿದನು” ಎಂಬ ಉ ಪಕಾರ ವನ್ನು ನೆನೆದು ಸಂತೋಷ ಪಟ್ಟರು. ಆತನಲ್ಲಿ ಕೃತಜ್ಞತೆಯ ಭಾವನೆ ಮೂಡಿತ್ತು.

ಆದರೆ ವಾಯುಭೂತಿಯು “ತಮಗೆ ಮಾವನು ನಾವು ಸೋದರಳಿಯರೆಂದು ತಿಳಿದಿದ್ದರು ತಮ್ಮ ಕಷ್ಟಕ್ಕೆ ಗುರಿಮಾಡಿದನು. ಅವನು ಮಾಡಿದದೆಲ್ಲವು ಅಪಕಾರವೇ” ಎಂದು ಭಾವಿಸಿದನು “ನಾವು ಭಿಕ್ಷೆಬೇಡಿ, ಅಲೆದಾಡಿ ತಂದ ಅನ್ನಕ್ಕೆ ಸೇರಿಸಲು ಎಣ್ಣೆಯನ್ನಾಗಲಿ, ಉಪ್ಪಾಗಲಿ, ಮಜ್ಜಿಗೆಯನ್ನಾಗಲೀ ನಮ್ಮ ಮಾವ ನಮಗೆ ಎಂದಿಗೂ ಕೊಡಲಿಲ್ಲ. ಕೊಡಿಸಲು ಇಲ್ಲ. ಕೆರೆಗೆ ಹೋಗಿ ಸ್ನಾನ ಮಾಡುವ ಸಂದರ್ಭದಲ್ಲಿಯ ತಲೆಗೆ ಹಚ್ಚಲು ಎಣ್ಣೆಯಾದರೂ ಕೊಡಲಿಲ್ಲ. ತಾನು ಮಾತ್ರ ದಿವ್ಯವಾದ ಆಹಾರವನ್ನು ನಿತ್ಯವೂ ನೆಂಟರೊಂದಿಗೆ, ಆಳುಗಳೊಂದಿಗೆ ಕೂಡಿಕೊಂಡು ಉಣ್ಣುತ್ತಿದ್ದರು. ನಮ್ಮಿಬ್ಬರಿಗೂ ಏಳೆಂಟು ವರ್ಷಗಳವರೆಗೆ ಶತ್ರುಗಳಂತೆಯೇ ಕಂಡನು” ಎಂಬುದಾಗಿ ವಿದ್ಯೆ ಹೇಳಿಕೊಟ್ಟ ಮಾವನ ಬಗ್ಗೆ ಬೇಸರ ತಾತ್ಸರದ ಭಾವನೆಯನ್ನು ಹೊಂದಿದನು.

1) ‘ಕಣ್ಣನೀರಂ ತೀವಿ ನೆಲನಂ ಬರೆಯುತ್ತಿದೆ”.

ಪ್ರಸ್ತಾವನೆ: ಪ್ರಸ್ತುತ ಈ ಮೇಲ್ಕಂಡ ವಾಕ್ಯವನ್ನು ಕೃತಿ ಕಾರರಾದ ಶಿವಕೋಟ್ಯಾಚಾರ್ಯರು ರಚಿಸಿರುವ “ವಡ್ಡಾರಾಧನೆ” ಎಂದ ಗ್ರಂಥದಿಂದ ಆರಿಸಲಾಗಿದೆ. ಪ್ರಸ್ತುತ ‘ಅಗ್ನಿಭೂತಿ – ವಾಯುಭೂತಿ’ ಎಂಬ ಪಠ್ಯ ಭಾಗವನ್ನು ವಡ್ಡಾರಾಧನೆ ಕೃತಿಯ “ಸುಕುಮಾರಸ್ವಾಮಿಯ ಕಥೆ” ಯಿಂದ ಆಯ್ದು ಕೊಳ್ಳಲಾಗಿದೆ.

ಸಂದರ್ಭ: ‘ಕೌಶಂಬಿಪಟ್ಟಣದಲ್ಲಿ’ ‘ಅತಿಬಲನ್’ ಎಂಬ ರಾಜನು ಆಳುತ್ತಿದ್ದನು ಸರ್ವಗುಣ ಸಂಪನ್ನರಾದ ಸೋಮಶರ್ಮನು ಈ ರಾಜನ ಬಳಿ ಮಂತ್ರಿಯಾಗಿದ್ದರನು, ಈತನಿಗೆ ಅಗ್ನಿಭೂತಿ – ವಾಯುಭೂತಿ ಎಂಬ ಇಬ್ಬರು ಮಕ್ಕಳಿದ್ದರು. ಇವರು ತಂದೆ – ತಾಯಿಯ ಮಾತನ್ನು ಕೇಳದೆ ವೇದ ಮುಂತಾದ ಯಾವ ಶಾಸ್ತಭ್ಯಾಸವಾಗಲಿ, ಶಸ್ತ್ರಭ್ಯಾಸವಾಗಲಿ ಕಲಿಯದೆ ತಂದೆ ಸಂಪಾದಿಸಿದ ಸಂಪತ್ತನ್ನೆಲ್ಲ ವೆಚ್ಚಮಾಡುತ್ತಾ ಸಪ್ತ ವ್ಯಸನಿಗಳಾಗಿದ್ದರು.

ಹೀಗಿರಲು ಒಮ್ಮೆ ಮಂತಿ ಸೋಮಶರ್ಮನು ತೀರಿಕೊಂಡನು. ರಾಜನು ಅವನ ಮಕ್ಕಳಿಬ್ಬರನ್ನು ಕರೆಸಿ ಪೂರ್ಣಸ್ನಾನ ಮಾಡಿಸಿ ಉಡುಪು, ಆಭರಣಗಳನ್ನು ಕೊಡಿಸಿ ಊಟಮಾಡಿಸಿ ರಾಜಸಭೆಗೆ ಕರೆಸಿದನು. ರಾಜನು ಅವರಿಬ್ಬರನ್ನು “ನೀವು ಯಾವ ವಿದ್ಯೆಯನ್ನು ಬಲ್ಲಿರಿ”? ಎಂದು ಕೇಳಿದ ಸಂದರ್ಭದಲ್ಲಿ ಈ ಮೇಲ್ಕಂಡ ವಾಕ್ಯದಲ್ಲಿ ಅಗ್ನಿಭೂತಿ ವಾಯುಭೂತಿಯರ ಪ್ರತಿಕ್ರಿಯೆಯನ್ನು ಪ್ರಸ್ತುತ ಪಡಿಸಲಾಗಿದೆ.

ಸ್ವಾರಸ್ಯ: ರಾಜನ ಮತನ್ನು ಕೇಳಿ ಇಬ್ಬರು (ಅಗ್ನಿಭೂತಿ ವಾಯುಭೂತಿ) ತಲೆ ತಗ್ಗಿಸಿದರು, ಕಣ್ಣು ತುಂಬಿ ಬಂದಿತು. ರಾಜನ ಪ್ರಶ್ನೆಗೆ ಉತ್ತರ ಕೊಡಲಾಗದೆ ತಲೆತಗ್ಗಿಸಿ ಕಾಲಿನಿಂದ ಬೆರಳಿನಿಂದ ಗೆರೆ ಎಳೆದು (ಗೀರ) ತೊಡಗಿದರು. ಸೂರ್ಯಮಿತ್ರನು, ನೀವು ನನ್ನ ತಂಗಿಯ ಮಕ್ಕಳು. ನನಗೆ ಸೋದರ ಅಳಿಯಂದಿರಾಗಿರುವಿರಿ, ನಿಮಗೆ ನಾನು ಸಲುಗೆಯನ್ನು ಕೊಡಲಿಲ್ಲ ಏಕೆಂದರೆ ನೀವು ಹಿಂದೆ ನಮ್ಮ ತಂದೆ ಕೊಟ್ಟ ಸಲುಗೆಯಿಂದ ಉನ್ನತ್ತರಾಗಿ ಕೆಟ್ಟು ಹೋದಿರಿ. ನಿಮ್ಮ ಯೋಗ್ಯ ಪಂಡಿತರನ್ನಾಗಿ ಮಾಡುವ ಉದ್ದೇಶದಿಂದ ನಿಮಗೆ ಸಲುಗೆಯುಕೊಡಲಿಲ್ಲ. ನಿಮ್ಮ ಮಾವ ಎಂಬ ಸತ್ಯವನ್ನು ತಿಳಿಸಲಿಲ್ಲ. ಇದಕ್ಕೆ ನೀವು ಸಿಟ್ಟಾಗಬಾರದು” ಎಂದು ಹೇಳಿದನು.

ವಿಶೇಷತೆ: ಅಗ್ನಿಭೂತಿ – ವಾಯಿಭೂತಿಯರಿಬ್ಬರು ಸಕಲ ವಿದ್ಯಾಶಾಸ್ತ್ರಗಳನ್ನು ಕಲಿಯುವಲ್ಲಿ ಸೂರ್ಯಮಿತ್ರನ ಜಾಣೆ. ಬುದ್ದಿವಂತಿಕೆ ಹಾಗೂ ಕರ್ತವ್ಯ ಪರಾಯಣತೆಯನ್ನು ಇಲ್ಲಿ ಕಾಣಬಹುದು.

4) “ಪಂಡಿತಜನಮೆಲ್ಲಂ ಮೆಚ್ಚಿ ಬಿಚ್ಚಳಿಸಿ”.

ಪ್ರಸ್ತಾವನೆ: ಪ್ರಸ್ತುತ ಈ ಮೇಲ್ಕಂಡ ವಾಕ್ಯವನ್ನು ಕೃತಿ ಶಿವಕೋಟ್ಯಾಚಾರ್ಯರು ರಚಿಸಿರುವ “ವಡ್ಡಾರಾಧನೆ” ಎಂದ ಗ್ರಂಥದಿಂದ ಆರಿಸಲಾಗಿದೆ. ಪ್ರಸ್ತುತ ‘ಅಗ್ನಿಭೂತಿ ವಾಯುಭೂತಿ’ ಎಂಬ ಪಠ್ಯ ಭಾಗವನ್ನು ವಡ್ಡಾರಾಧನೆ ಕೃತಿಯ “ಸುಕುಮಾರಸ್ವಾಮಿಯ ಕಥೆ” ಯಿಂದ ಆಯ್ದು ಕೊಳ್ಳಲಾಗಿದೆ.

ಸಂದರ್ಭ: ‘ಅಗ್ನಿಭೂತಿ – ವಾಯುಭೂತಿ’ ಇಬ್ಬರೂ ಎಲ್ಲಾರೀತಿ ಶಾಸ್ತ್ರಗಳನ್ನು ಕಲಿತು ಪಂಡಿತರಾಗಿ ಕೌಸಂಬಿ ಪಟ್ಟಣಕ್ಕೆ ಹಿಂತಿರುಗಿ ಬಂದು ತಾಯಿಗೆ ನಮಸ್ಕರಿಸಿ, ನಂತರ ಮಹಾರಾಜರಲ್ಲಿಗೆ ಬಂದು ಅವನನ್ನು ಕಂಡು ಬೇರೆ ಬೇರೆಯಾಗಿ ಸ್ತುತಿ ರಚನೆ ಮಾಡಿದರು. ಅದನ್ನು ವ್ಯಾಕರಣಶುದ್ದರಾಗಿ ವ್ಯಾಖ್ಯಾನಮಾಡಿ, ತಮ್ಮ ಪಾಂಡಿತ್ಯವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಈ ಮೇಲ್ಕಂಡ ವಾಕ್ಯವನ್ನು ರಚಿಸಲಾಗಿದೆ.

ಸ್ವಾರಸ್ಯ: ಅಗ್ನಿಭೂತಿ – ವಾಯುಭೂತಿ ಇಬ್ಬರು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದಾಗ ರಾಜಸಭೆಯಲ್ಲಿದ್ದ ಪಂಡಿತರೆಲ್ಲರೂ ಮೆಚ್ಚಿ ಬಹಳವಾಗಿ ಹೊಗಳಿದರು. ರಾಜನು ಕೂಡ ಮನಸ್ಸಿನಲ್ಲಿ ಬಹಳ ಸಂತೋಷಗೊಂಡನು. ಹಾಗೂ ಅಗ್ನಿಭೂತಿ-ವಾಯುಭೂತಿಗೆ ಅವರ ತಂದೆಯ ಸ್ಥಾನವನ್ನು ಕೊಡಲು ನಿರ್ಧರಿಸಿ ಮಂತ್ರಿ ಪದವಿ ಯನ್ನು ಕೊಟ್ಟರು.

ವಿಶೇಷತೆ: ಅಗ್ನಿಭೂತಿ-ವಾಯುಭೂತಿಯರಿಬ್ಬರು, ತಂದೆ ಇದ್ದಾಗ ಅವರ ಮಾತುಗಳನ್ನು ಕೇಳದೆ ಅವಮಾನ ಸಹಿಸಬೇಕಾಯಿತು. ನಂತರ ಏಳೆಂಟು ವರ್ಷಗಳವರೆಗೆ ಕಷ್ಟ ಪಟ್ಟು ಎಲ್ಲಾ ರೀತಿಯ ಪಾಂಡಿತ್ಯವನ್ನು ಗಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಎಂಬುದು ಎಲ್ಲರಿಗೂ ವಿದ್ಯೆಯ ಮಹತ್ವವನ್ನು ತಿಳಿಸಿಕೊಡುತ್ತದೆ.

ಅ) ಭರತ ಕ್ಷೇತ್ರದೊಳ್ : ಸಪ್ತಮಿ :: ನೆಲನಂ : ದ್ವಿತೀಯ ವಿಭಕ್ತಿ

ಆ) ಪಸರ : ಸಲುಗೆ :: ತುಟಿಲ್ : ನಮಸ್ಕಾರ

ಇ) ಬುದ್ದಿಯೊಡೆಯ : ಆಗಮಸಂಧಿ :: ನೋಡಿದವರೆಲ್ಲರ : ಲೋಪಸಂಧಿ

ಈ) ಕಪ್ಪಡಮುಟ್ಟು : ಕ್ರಿಯಾಸಮಾಸ :: ಸಪ್ತವ್ಯಸನಗಳು : ದ್ವಿಗು ಸಮಾಸ

1) ಶೌಚಾಚಾರಗಳು. ಶೌಚ + ಆಚಾರಗಳು = ಸವರ್ಣದೀರ್ಘಸಂಧಿ

2) ನೋಡಿದರೆಲ್ಲರ – ನೋಡಿದರ್ + ಎಲ್ಲರ = ಲೋಪಸಂಧಿ

3) ತೆರಿಗೆಯಿಲ್ಲ – ತೆರಿಗೆ + ಇಲ್ಲ = ಆಗಮಸಂಧಿ

4) ವ್ಯಸನಾಭಿಭೂತ – ವ್ಯಸನ + ಅಭಿಭೂತ = ಸವರ್ಣದೀರ್ಘಸಂಧಿ

1) ಕಪ್ಪಡಮುಟ್ಟು

2) ಸಪ್ತವ್ಯಸನಗಳು

3) ಇರುಳುಂ + ಪಗಲುಂ

4) ಪಂಚಮಹಾಪಾತಕನ

5) ಆಕುಅಂಗಮಂ

6) ಪದಿನೆಂಟು ಧರ್ಮ ಶಾಸ್ತ್ರ

1) ಮಹಿಳಾ ಸಬಲೀಕರಣ.

ಪ್ರಸ್ತಾವನೆ : ಯತ್ರ ನಾರ್ಯಸ್ತು ಪೂಜ್ಯಂತೆ ತತ್ರರಮಂತೆ ದೇವತಾ ಎಂಬುದು ಹಿಂದೂ ಸಭ್ಯತೆಯ ಸಂಸ್ಕೃತಿಯ ಪ್ರತೀಕವಾಗಿದೆ. ಅಂದರೆ ಎಲ್ಲಾ ನಾರಿಯರನ್ನು ಪೂಜನೀಯ ದೃಷ್ಟಿಯಿಂದ ಗೌರವದಿಂದ ನೋಡುವರೋ ಅಲ್ಲಿ ಭಗವಂತನು ವಾಸಿಸುವನು ಎಂಬುದು ಇದರ ಅರ್ಥ.

ಮತ್ತೊಂದೆಡೆ ಮಹಿಳೆಯರನ್ನು ‘ಅಬಲೆ’ ಎಂದು ನಿಕೃಷ್ಟವಾಗಿ ಕಾಣುತ್ತಿದ್ದ ಸಾಮಾಜಿಕ ಪರಿಸರ ಏರ್ಪಟ್ಟಿತ್ತು. ಇದರ ಪರಿಣಮವಾಗಿ ಆಕೆ ಶೋಷಣೆಗೆ ಒಳಗಾಗುತ್ತಿದ್ದಳು. ಮಹಿಳೆಯರ ಶೋಷಣೆಯು, ರಾಮಾಯಣ, ಮಹಾಭಾರತ ಕಾಲದಿಂದ ಇಂದಿನ 21ನೇ ಶತಮಾನದವರೆಗೂ ಮುಂದುವರೆಯುತ್ತಿರುವುದು ಶೋಚನೀಯವಾಗಿದೆ.

ವಿವರಣೆ : ಇಂದು 21ನೇ ಶತಮಾನದಲ್ಲಿ ಮಹಿಳೆ ತಾನು ಅಬಲೆಯಲ್ಲ ಸಬಲೆ ಎಂಬುದನ್ನು ನಿರೂಪಿಸುವ ಪರಿಸ್ಥಿತಿ ಬಂದೊದಗಿದೆ. ಅಂತೆಯೇ ಇಂದು ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಹಾಗೂ ರಾಜಕೀಯವಾಗಿ, ಆರ್ಥಿಕವಾಗಿ ತಾವು ಕೂಡ ಸಬಲೆಯರು ಎಂದು ನಿರೂಪಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರಲ್ಲಿ ತಮ್ಮ ಫಲಿತಾಂಸವನ್ನು ಹುಡುಗರಿಗಿಂತ ಹೆಚ್ಚು ಪಟ್ಟು ಸಾಧಿಸುತ್ತಿದ್ದಾರೆ. ಶಿಕ್ಷಕಿಯಾಗಿ ಮಂಟೋಸರಿಯಿಂದ ವಿಶ್ವವಿದ್ಯಾನಿಲಯದ ಎಲ್ಲಾ ಹಂತಗಳಲ್ಲಿ ಮಹಿಳೆ ತನ್ನನ್ನು ಗುರುತಿಸಿಕೊಂಡಿದ್ದಾಳೆ.

ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಶಂಕೈ ಹೆಚ್ಚಾಗಿದೆ ಎಂಬುದು ಸಂತಸದ ವಿಷಯವಾಗಿದೆ. ಇನ್ನು ರಾಜಕೀಯ ಕ್ಷೇತ್ರದಲ್ಲಿ, ಇಂದಿರಾಗಾಂಧಿ, ಸುಷ್ಮಾ ಸ್ವರಾಜ್, ಉಮಾಶ್ರೀ ಮುಂತಾದದರು ಮಂತ್ರಿ, ಪ್ರಧಾನಮಂತ್ರಿಯ ಸ್ಥಾನವನ್ನು ಅಲಂಕರಿಸಿ ಸಬಲೀಕರಣವನ್ನು ಸಾರಿದ್ದಾರೆ.

ಇದೇ ರೀತಿ ಆರ್ಥಿಕವಾಗಿ ಸ್ವತಃ ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿದ್ದಾಳೆ.

ಉದಾ: ಸುಧಾಮೂರ್ತಿ ಮುಂತಾದವರು.

ವೈದ್ಯಕೀಯ ಕ್ಷೇತ್ರದಲ್ಲಿ, ನ್ಯಾಯಾಲಗಳಲ್ಲಿ ವಕೀಲರಾಗಿ, ಇಂಜಿನಿಯರ್, ಪೈಲಟ್, ಗಗನಸಖಿ, ಅಷ್ಟೇ ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಗೈದಿದ್ದಾರೆ.

ಉಪಸಂಹಾರ : ವಿದ್ಯಾವಂತ ಮಹಿಳೆಯರು ಮಾತ್ರ ಈ ಕ್ಷೇತ್ರದಲ್ಲಿದ್ದಾರೆ ಎಂಬುದೇನೂ ಇಲ್ಲ. ರೈತರಾಗಿ, ಹೈನುಗಾರಿಕೆಯಲ್ಲಿಯೂ, ಕಾಂಡಿಮೆಂಟ್ಸ್ ಮುಂತಾದವುಗಳಲ್ಲಿಯೂ ಮಹಿಳೆಯರು ಇಂದು ಸ್ವತಂತ್ರವಾಗಿ ಸಬಲಳಾಗಿ ಗುರ್ತಿಸಿಕೊಂಡಿದ್ದಾರೆ.

ಆದ್ದರಿಂದ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮೀಸಲಾತಿ ಸ್ಥಾನವನ್ನು ಕೊಟ್ಟಿದ್ದು ಸರ್ಕಾರವು ಕೂಡ ಆರ್ಥಿಕ ನೆರವು ನೀಡುವಲ್ಲಿ ತನ್ನ ಸಹಾಯಹಸ್ತ ಚಾಚಿದೆ.

`ಇಂದು ಮಹಿಳೆ ಅಂತರಾಷ್ಟ್ರೀಯ ಮಟ್ಟದಲ್ಲಿ ‘ಮಹಿಳಾ ದಿನಾಚರಣೆ’ ಆಚರಿಸುವಲ್ಲಿ ಗುರುತಿಸಿಕೊಂಡಿದ್ದು ‘ತೊಟ್ಟಿಲು ತೂಗುವ ಕೈ ಜಗವನ್ನೇ ಆಳಬಲ್ಲಳು’ ಎಂಬುದನ್ನು ನಿರೂಪಿಸಿದ್ದಾಳೆ.

ಪ್ರಸ್ತಾವನೆ : ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಇಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನೇ ಕೊಡಲಾಗಿದೆ. 6 ರಿಂದ 14 ವರ್ಷದವರೆಗೆ ಉಚಿತ ಕಡ್ಡಾಯ ಶಿಕ್ಷಣ ವ್ಯವಸ್ಥೆಯು ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಆದರೂ ಶಾಲೆಯಿಂದ ಹೊರಗುಳಿಯುವ ಸಂಖ್ಯೆ ಹೆಚ್ಚಾಗುತ್ತಿತ್ತು. ಇದನ್ನು ಪರಿಶೀಲಿಸಿದಾಗ ಹಲವಾರು ಕಾರಣಗಳು ತಿಳಿದು ಬಂದು ಆ ಕಾರಣಗಳು ಒಂದು ರೀತಿಯ ಸಮಸ್ಯೆ ಎಂದೇ ಹೇಳಬಹುದು. ಇವುಗಳನ್ನು ತಡೆಗಟ್ಟಲು, ಕೇಂದ್ರ ಶಿಕ್ಷಣ ನೀತಿಯ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿತು. ಅವುಗಳಲ್ಲಿ ‘ಸರ್ವಶಿಕ್ಷಣ ಅಭಿಯಾನ’ ಬಹಳ ಪ್ರಮುಖವಾದದ್ದು.

1) ಕೌಸಂಬಿಯ ರಾಜ ಹಾಗೂ ರಾಣಿ ಯಾರು?

ಕೌಸಂಬಿಯ ರಾಜ ಅತಿಬಲ ಹಾಗೂ ಆತನ ರಾಣಿ ಮನೋಹರಿ.

2) ಅಗ್ನಿಭೂತಿ-ವಾಯುಭೂತಿ ಇವರ ತಂದೆ-ತಾಯಿಗಳ ಹೆಸರೇನು?

ಅಗ್ನಿಭೂತಿ-ವಾಯುಭೂತಿ ಇವರ ತಂದೆ ಸೋಮಶರ್ಮ ಹಾಗೂ ತಾಯಿ ಕಾಶ್ಯಪಿ.

3) ರಾಜಗೃಹ ಪಟ್ಟಣದ ರಾಜ ಹಾಗೂ ರಾಣಿಯ ಹೆಸರೇನು?

ರಾಜಗೃಹ ಪಟ್ಟಣದ ರಾಜ ಸುಬಲ ಹಾಗೂ ಆತನ ರಾಣಿ ಸುಪ್ರಭೆ.

4) ಕಾಶ್ಯಪಿಯ ಸೋದರ (ಅಣ್ಣನ) ಹೆಸರೇನು?

ಕಾಶ್ಯಪಿಯ ಸೋದರನ ಹೆಸರು ಸೂರ್ಯಮಿತ್ರ.

5) ಅಗ್ನಿಭೂತಿ-ವಾಯುಭೂತಿ ಇಬ್ಬರು ರಾಜನನ್ನು ಹೇಗೆ ಮೆಚ್ಚಿಸಿದರು?

ಮಹಾರಾಜನನ್ನು ಕಂಟು ಬೇರೆ ಬೇರೆಯಾಗಿ ಸ್ತುತಿಸಿ ವ್ಯಾಕರಣ ಬದ್ಧವಾಗಿ ವಿವರಿಸಿ. ರಾಜನನ್ನು ಸಂತೋಷ ಪಡಿಸಿದರು.

1) ವತ್ಸೆ ಎಂಬ ನಾಡಿನಲ್ಲಿ ಕೌಸಂಬಿ ಪಟ್ಟಣವಿತ್ತು.

2) ಕೌಸಂಬಿಯ ಮಂತ್ರಿ ಸೋಮಶರ್ಮ.

3) ಅಗ್ನಿಭೂತಿ – ವಾಯುಭೂತಿ ಸಪ್ತವ್ಯಸನಿ ಗಳಾಗಿದ್ದರು.

4) ಕಾಶ್ಯಪಿಯು ತನ್ನ ಮಕ್ಕಳನ್ನು ಸೂರ್ಯಮಿತ್ರನ ಬಳಿ.

5) ರಾಜಗೃಹ ಎಂಬ ಪಟ್ಟಣವು ಮಗಧ ನಾಡಿನಲ್ಲಿತ್ತು.

1) ಜಂಬೂದ್ವೀಪ

ಭಾರತ ದೇಶವನ್ನು ಜಂಬೂದ್ವೀಪ ಎಂಬು ಕೂಡ ಕರೆಯುವರು.

2) ಪೊಡಮಟ್ಟು

ಅಗ್ನಿಭೂತಿ-ವಾಯುಭೂತಿ, ತಾಯಿಗೆ ಪೊಡಮಟ್ಟು ರಾಜಗೃಹದೆಡೆ ಹೊರಟರು.

1) ಶಾಲಿಹೋತ್ರಅ) ಗಜಶಾಸ್ತ್ರ
2) ಪಾಳಕಾಪ್ಯಂಆ) ತರ್ಕಶಾಸ್ತ್ರ
3) ಕೌಟಿಲ್ಯಇ) ಆಯುರ್ವೇದ ಗ್ರಂಥದ ಕರ್ತೃು
4) ಚರಕಈ) ಅರ್ಥಶಾಸ್ತ್ರ
5) ನ್ಯಾಯವಿಸ್ತಾರಉ) ಅಶ್ವಶಾಸ್ತ್ರ

ಉತ್ತರ : [1-ಉ], [2-ಅ], [3-ಈ], [4-ಇ], [5-ಆ]

10ನೇ ತರಗತಿ ಲಂಡನ್‌ ನಗರ ಕನ್ನಡ ನೋಟ್ಸ್

10ನೇ ತರಗತಿ ಹಸುರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

Leave a Reply

Your email address will not be published. Required fields are marked *