10th Standard Bharatakke Yuropiyannara Agamana Chapter Notes | 10ನೇ ತರಗತಿ ಭಾರತಕ್ಕೆ ಯುರೋಪಿಯನ್ನರ ಆಗಮನ ಪಾಠದ ನೋಟ್ಸ್‌

Bharatakke Yuropiyannara Agamana

10th Standard Bharatakke Yuropiyannara Agamana Social Science Notes Question Answer Guide Mcq Pdf Download in Kannada Medium Karnataka 2025, 10ನೇ ತರಗತಿ ಭಾರತಕ್ಕೆ ಯುರೋಪಿಯನ್ನರ ಆಗಮನ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, KSEEB Solutions for Class 10 Social‌ Notes 10th Social Science 1st lesson Notes, 10th Class Social 1st Chapter Notes Kannada Medium, SSLC history Chapter 1 Notes PDF, Bharatakke Yuropiyannara Agamana Kannada Question Answer 10th, ಭಾರತಕ್ಕೆ ಯುರೋಪಿಯನ್ನರ ಆಗಮನ Notes Pdf 10th.

Bharatakke Yuropiyannara Agamana

10ನೇ ತರಗತಿ ಭಾರತಕ್ಕೆ ಯುರೋಪಿಯನ್ನರ ಆಗಮನ ಸಮಾಜ ವಿಜ್ಞಾನ ನೋಟ್ಸ್‌

ಅಭ್ಯಾಸ

  1. ಸಾ.ಶ. 1453ರಲ್ಲಿ ಆಟೋಮಾನ್ ಟರ್ಕರು ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
  2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವನು ವಾಸ್ಕೋಡಗಾಮ
  3. ಸಾ.ಶ. 1741ರಲ್ಲಿ ಡಚ್ಚರು ತಿರುವಾಂಕೂರಿನ ಮೇಲೆ ಯುದ್ಧ ಸಾರಿದರು.
  4. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಪಾಂಡಿಚೇರಿ.
  5. ರಾಬರ್ಟ್ ಕೈವನು ಸಾ.ಶ. 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ ಪ್ಲಾಸಿ ಕದನ ಸಾರಿದ್ದನು.
  6. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
  7. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ರಾಬರ್ಟ್ ಡ್ರೈವ್.

1.ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

ಮಧ್ಯಕಾಲದಲ್ಲಿ ಭಾರತದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿಯಾದ ಕಾನ್ ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು. ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು.

2.ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ.

ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು. ಆ ನಗರವನ್ನು ಆಟೋಮಾನ್ ಟರ್ಕರು ವಶಪಡಿಸಿಕೊಂಡರು. ಇದರಿಂದಾಗಿ ಆ ನಗರವನ್ನು ಸಂಧಿಸುವ ಎಲ್ಲಾ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು. ಹೊಸದಾಗಿ ಸಿಕ್ಕ೮ಅವಕಾಶದಿಂದ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು. ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ. ಇದೇ ವೇಳೆ ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಬೇಕಿತ್ತು. ಹೀಗಾಗಿ ಭಾರತಕ್ಕೆ ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ಸ್ಪೇನ್, ಪೋರ್ಚುಗಲ್ ಮೊದಲಾದ ಯುರೋಪಿನ ರಾಜರು ಹೊಸ ಜಲಮಾರ್ಗಗಳನ್ನು ಕಂಡುಹಿಡಿಯಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು. ಇದಕ್ಕೆ ಪೂರಕವಾಗಿ ದಿಕ್ಕೂಚಿ, ಆಸ್ಟ್ರೇಲೋಬ್, ಸಿಡಿಮದ್ದುಗಳ ಆವಿಷ್ಕಾರ ನೆರವಿಗೆ ಬಂದವು.

3. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರುಗಳನ್ನು ಪಟ್ಟಿಮಾಡಿ.

  • ಪೋರ್ಚುಗೀಸರು
  • ಇಂಗ್ಲಿಷರು
  • ಡಚ್ಚರು
  • ಫ್ರೆಂಚರು

4. ಮಾರ್ತಾಂಡ ವರ್ಮನು ಡಚ್ಚರನ್ನು ಹೇಗೆ ನಿಯಂತ್ರಿಸಿದನು?

ಕಾಯಂಕುಳಂ, ಕೊಚ್ಚಿ, ಪುರಕ್ಕಾಡ್ ಮತ್ತು ವಡಕ್ಕುಂಕೂರ್ ಸಂಸ್ಥಾನಗಳ ಜೊತೆಗೂಡಿ ಡಚ್ ಸೇನೆಯು ತಿರುವಾಂಕೂರಿನ ಮೇಲೆ ಆಕ್ರಮಣ ಮಾಡಿದಾಗ ಮಾರ್ತಾಂಡ ವರ್ಮನ ಪಡೆ ಡಚ್ ಕೂಟವನ್ನು ಸೋಲಿಸಿ ನೆಡುಮಂಗಡ ಮತ್ತು ಕೊಟ್ಟಾರಕರ ವ್ಯಾಪಾರಿ ಕೇಂದ್ರಗಳನ್ನು ವಶಪಡಿಸಿಕೊಂಡಿತು. ಸಾ.ಶ. 1741ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಟ್ಟಾರಕರ ಸಂಸ್ಥಾನವನ್ನು ಮುಂದಿಟ್ಟುಕೊಂಡು ತಿರುವಾಂಕೂರಿನ ಮೇಲೆ ಯುದ್ಧ ಸಾರಿತು. ಈ ಯುದ್ಧದಲ್ಲಿಯೂ ತಿರುವಾಂಕೂರು ಸೈನ್ಯ ಮೇಲುಗೈ ಸಾಧಿಸಿ ಡಚ್ಚರು ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಬೇಕಾಯಿತು. ಅಂತಿಮವಾಗಿ ಸಾ.ಶ. 1753 ರ ಆಗಸ್ಟ್ 15ರಂದು ನಡೆದ ಒಪ್ಪಂದದಲ್ಲಿ ಡಚ್ ಪಡೆಗಳು ತಮ್ಮ ಸಂಪೂರ್ಣ ಅಧಿಕಾರವನ್ನು ತಿರುವಾಂಕೂರಿಗೆ ಒಪ್ಪಿಸಿ ಶರಣಾದವು.

05. ಎರಡನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

ಬದಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫ್‌ಜಾನ ಮತ್ತೊಬ್ಬ ಮಗನಾದ ಸಲಾಬತ್ ಜಂಗನನ್ನು ಹೈದರಾಬಾದಿನ ನಿಜಾಮನನ್ನಾಗಿ ಮಾಡಿದರು. ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತ ಬುಸ್ಸಿ ಎಂಬ ಅಧಿಕಾರಿಯನ್ನು ನೇಮಿಸಿದ್ದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್‌ನ ನವಾಬನಾಗಿದ್ದನು. ಆದರೆ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕೈವನು ಕಾರ್ನಾಟಿಕ್ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಸಾಹೇಬನನ್ನು ಸೋಲಿಸಿದನು. ಅಂತಿಮವಾಗಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನಾಗಿ ನೇಮಕ ಮಾಡಿದರು. ಪಾಂಡಿಚೇರಿ ಒಪ್ಪಂದದೊಂದಿಗೆ ಈ ಯುದ್ಧವು ಮುಕ್ತಾಯವಾಯಿತು.

06. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.

ಕಾರಣಗಳು:

  • ದಸ್ತಕ್‌ಗಳ ದುರುಪಯೋಗ: ಕಂಪನಿಯ ವ್ಯಾಪಾರಕ್ಕಾಗಿ ನೀಡಿದ ದಸ್ತಕ್‌ಗಳನ್ನು ಬ್ರಿಟಿಷ್ ನೌಕರರು ದುರುಪಯೋಗ ಪಡಿಸಿಕೊಳ್ಳುವ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದದ್ದು ಸಿರಾಜನನ್ನು ಕೆರಳಿಸಿತು.
  • ಅನುಮತಿ ಇಲ್ಲದೆ ಕೋಟೆಯ ದುರಸ್ಥಿ: ಪರಸ್ಪರ ಸ್ಪರ್ಧಿಗಳಾದ ಬ್ರಿಟಿಷ್ ಮತ್ತು ಫ್ರೆಂಚರು ತಮ್ಮ ತಮ್ಮ ವ್ಯಾಪಾರಿ ಕೋಟೆಗಳನ್ನು ಶಸ್ತ್ರಾಸ್ತ್ರಗಳಿಂದ ಬಲಪಡಿಸಿಕೊಳ್ಳತೊಡಗಿದರು. ಅನುಮತಿ ಪಡೆಯದೆ ಕೋಟೆಯನ್ನು ದುರಸ್ಥಿ ಮಾಡಿಸಿದ್ದರಿಂದ ಹಾಗೂ ಫಿರಂಗಿಗಳನ್ನು ತೆಗೆದು ಹಾಕಲು ಸಿರಾಜ್ ಸೂಚಿಸಿದ ನಾದರೂ ಬ್ರಿಟಿಷರು ಪಾಲಿಸಲಿಲ್ಲ. ಇದರಿಂದ ಸಿರಾಜನು ಆಕ್ರೋಶಗೊಂಡನು.
  • ಕಪ್ಪುಕೋಣೆ ದುರಂತ: ಆಗ ಸಿರಾಜನು ಪೋರ್ಟ್ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು ಕೆಲವರನ್ನು ಸೆರೆಹಿಡಿದನು. ಸಿರಾಜನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು. ಅವರಲ್ಲಿ 123 ಮಂದಿ ಅಸುನೀಗಿದರು ಮತ್ತು 23 ಜನ ಬದುಕಿ ಉಳಿದರು ಎಂಬುದಾಗಿತ್ತು. ಈ ಸುದ್ದಿ ಕೇಳಿ ರಾಬರ್ಟ್ ಡ್ರೈವ್ ಉಗ್ರ ಕೋಪದಲ್ಲಿ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನು.

ಪರಿಣಾಮಗಳು:

  • ಈ ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
  • ಮೀರ್ ಜಾಫರ್ ಬಂಗಾಳದ ನವಾಬನಾದನು.
  • ಕಂಪನಿಯು ಬಂಗಾಳದ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
  • ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಯುದ್ಧ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ ಹದಿನೇಳು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.

07. ಬಕ್ಸಾರ್ ಕದನದ ಪರಿಣಾಮಗಳಾವುವು?

  • ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
  • ಷಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
  • ಔದ್‌ನ ನವಾಬನಾದ ಷುಜ್-ಉದ್-ದೌಲನು ಕಂಪನಿಗೆ ಯುದ್ಧನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
  • ಮೀ‌ರ್ ಜಾಫ‌ರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.

1. ರಾಜ ಮಾರ್ತಾಂಡ ವರ್ಮನ ಸಾಧನೆಗಳನ್ನು ತಿಳಿಸಿ..

ಸಾ.ಶ. 1729ರಿಂದ ಸಾ.ಶ. 1758ರ ವರೆಗೆ ವೈನಾಡ್ ಸಂಸ್ಥಾನವನ್ನು ಆಳಿದ ಮಾರ್ತಾಂಡ ವರ್ಮ ತನ್ನ ಸುತ್ತಮುತ್ತಲಿನ ಸಂಸ್ಥಾನಗಳು ಮತ್ತು ಪರಕೀಯ ಡಚ್ಚರಿಂದ ತನ್ನ ಸಂಸ್ಥಾನವನ್ನು ರಕ್ಷಿಸಿದ. ತನ್ನ ರಾಜಧಾನಿಯನ್ನು ಪದ್ಮನಾಭಪುರದಿಂದ ತಿರುವನಂತ ಪುರಕ್ಕೆ ಸ್ಥಳಾಂತರಿಸಿದ ಆತ ಕರಿಮೆಣಸಿನ ವ್ಯಾಪಾರದಲ್ಲಿ ಹಿಡಿತ ಸಾಧಿಸುತ್ತಿದ್ದ ಡಚ್ಚರನ್ನು ತಡೆಗಟ್ಟಿದ.

2. ಬ್ರಿಟಿಷರು ಪೋರ್ಟ್ ವಿಲಿಯಂ ಕೋಟೆಯನ್ನು ಹೇಗೆ ಕಟ್ಟಿದರು?

ಬ್ರಿಟಿಷರು ಸಾ.ಶ. 1690ರ ದಶಕದಲ್ಲಿ ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಪೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು.

3. ಬಕ್ಸಾರ್ ಕದನ ಯಾರ ನಡುವೆ ನಡೆಯಿತು?

ಬಕ್ಸಾರ್ ಕದನ ಮೀರ್ ಖಾಸಿಂ ನೇತೃತ್ವದ ಮೂರು ಸಂಯುಕ್ತ ಸೇನೆಗಳು ಮತ್ತು ಹೆಕ್ಟ‌ರ್ ಮನ್ರಿ ನೇತೃತ್ವದ ಬ್ರಿಟಿಷ್ ಸೇನೆಯ ನಡುವೆ ನಡೆಯಿತು.

4. ಭಾರತದ ಯಾವ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು?

ಮೆಣಸು, ಜೀರಿಗೆ, ದಾಲ್ಟಿನ್ನಿ, ಏಲಕ್ಕಿ, ಶುಂಠಿ ಮುಂತಾದ ಸಾಂಬಾರ ಪದಾರ್ಥಗಳು.

5. ಭಾರತದಲ್ಲಿ ಡಚ್ಚರು ತಮ್ಮ ಕೋಠಿಗಳನ್ನು ಎಲ್ಲೆಲ್ಲಿ ಸ್ಥಾಪಿಸಿದರು?

ಭಾರತದಲ್ಲಿ ಡಚ್ಚರು ತಮ್ಮ ಕೋಠಿಗಳನ್ನು ಸೂರತ್, ಟ್ರೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲಿ ಪಟ್ಟಣ, ಚಿನ್ಸೂರ್ ಮೊದಲಾದ ಕಡೆಗಳಲ್ಲಿ ಸ್ಥಾಪಿಸಿದರು.

6. ಮೂರನೆಯ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ.

ಫ್ರೆಂಚರ ಕೌಂಟ್ ಡಿ ಲಾಲಿಯು ಸಾ.ಶ. 1760ರಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು. ಈ ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ್. ಐರ್ಕಟನು ಫ್ರೆಂಚರನ್ನು ಸೋಲಿಸಿದನಲ್ಲದೆ ಬುಸ್ಸಿಯನ್ನು ಸೆರೆಹಿಡಿದನು. ಲ್ಯಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು. ಅಂತಿಮವಾಗಿ ಐರ್ಕೂಟನು ಪಾಂಡಿಚೆರಿಗೂ ಮುತ್ತಿಗೆ ಹಾಕಿದಾಗ ಲ್ಯಾಲಿಯು ಸಾ.ಶ. 1761ರಲ್ಲಿ ಬೇಷರತ್ತಾಗಿ ಶರಣಾದನು.

7. ಎರಡನೇ ಕರ್ನಾಟಿಕ್ ಯುದ್ಧದ ಪರಿಣಾಮ ತಿಳಿಸಿ.

ಫ್ರೆಂಚರು ಡೂಪ್ಲೆಯನ್ನು ಹಿಂದಕ್ಕೆ ಕರೆಸಿಕೊಂಡರು. ಈ ಯುದ್ಧವು ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು, ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.

8. ಮೊದಲ ಕಾರ್ನಾಟಿಕ್ ಯುದ್ಧದ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.

ಡೂಪ್ಲೆಯ ಕೋರಿಕೆಯ ಮೇರೆಗೆ ಲಾಬೋರ್ಡಾನಾಯಿಸ್ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್‌ನಿಂದ ಬಂದು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು. ಅಸಹಾಯಕರಾದ ಬ್ರಿಟಿಷರು ಕಾರ್ನಾಟಿಕ್ ನವಾಬನಾದ ಅನ್ನರುದ್ದೀನನಲ್ಲಿ ಮೊರೆ ಇಟ್ಟರು. ಮದ್ರಾಸ್‌ನಿಂದ ಫ್ರೆಂಚರನ್ನು ಹೊರಗಟ್ಟಲು ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತು. ಕೊನೆಗೆ ಲಾಬೋರ್ಡಿನನು ಡೂಪ್ಲೆಗೆ ತಿಳಿಸದೆ ಬ್ರಿಟಿಷರಿಂದ ಹಣಪಡೆದು ಮದ್ರಾಸನ್ನು ಬಿಟ್ಟುಕೊಟ್ಟು ಮಾರಿಷಸ್‌ಗೆ ಹೊರಟುಹೋದನು. ಇದರಿಂದ ಕೋಪಗೊಂಡ ಡೂಪ್ಲೆಯು ಮದ್ರಾಸನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದನು. ಅಂತಿಮವಾಗಿ ಈ ಯುದ್ಧವು ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ ‘ಏಕ್ಸ್-ಲಾ-ಚಾಪೆಲ್’ ಒಪ್ಪಂದದೊಂದಿಗೆ ಮುಕ್ತಾಯವಾಯಿತು.

9. ಭಾರತದಲ್ಲಿ ಫ್ರೆಂಚರ ವ್ಯಾಪಾರ ಕೇಂದ್ರಗಳನ್ನು ಹೆಸರಿಸಿ.

ಸೂರತ್, ಮಚಲಿಪಟ್ಟಣ, ಚಂದ್ರನಗರ, ಮಾಹೆ, ಕಾರೈಕಲ್, ಕಾಸಿಂಬಜಾರ್, ಬಾಲಸೂರ್.

10. ಆನ್ನೋ -ಡಿ- ಅಲ್ಬುಕರ್ಕನ ಸಾಧನೆಗಳಾವುವು?

  • ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡನು.
  • ಗೋವಾವನ್ನು ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು.

11. ಮೂರನೇ ಕಾರ್ನಾಟಿಕ್ ಯುದ್ಧ ಫ್ರೆಂಚರ ಮೇಲೆ ಉಂಟು ಮಾಡಿದ ಪರಿಣಾಮಗಳೇನು?

  • ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನಾದನು.
  • ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲ ನೆಲೆಗಳನ್ನು ಕಳೆದುಕೊಂಡರು.
  • ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂದಿರುಗಿಸಲಾಯಿತು
  • ದಕ್ಷಿಣ ಭಾರತದಲ್ಲಿ ಫ್ರೆಂಚರು ಮೂಲೆಗುಂಪಾದರು.

12. ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು ಯಾರು? ಅದರ ಲಕ್ಷಣಗಳೇನು?

ಸಾ.ಶ. 1765ರಲ್ಲಿ ರಾಬರ್ಟ್ ಪ್ರೈವನು ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದನು. ಇದರ ಪ್ರಕಾರ ಕಂದಾಯ ವಸೂಲಾತಿ, ನಾಗರಿಕ ಮತ್ತು ಅಪರಾಧ ನ್ಯಾಯ ನಿರ್ವಹಣಾ ವ್ಯವಸ್ಥೆಯನ್ನು ಭಾರತೀಯ ಅಧಿಕಾರಿಗಳಿಗೆ ನೀಡಲಾಯಿತು. ವಸೂಲಾದ ಕಂದಾಯದ ನಿರ್ವಹಣಾ ಆಡಳಿತವನ್ನು ಬ್ರಿಟಿಷರು ತಮ್ಮ ಬಳಿಯೇ ಇಟ್ಟುಕೊಂಡರು.

II. ಬಹು ಆಯ್ಕೆಯ ಪ್ರಶ್ನೆಗಳು:

1.ಯುರೋಪಿನ ವ್ಯಾಪಾರದ ಹೆಬ್ಬಾಗಿಲು:

ಎ) ಇಟಲಿ

ಬಿ) ಕಾನ್ ಸ್ಟಾಂಟಿನೋಪಲ್

ಸಿ) ಹಾಲೆಂಡ್

ಡಿ) ಇಂಗ್ಲೆಂಡ್

2. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು:

ಎ) ಬ್ರಿಟಿಷರು

ಬಿ) ಡಚ್ಚರು

ಸಿ) ಫ್ರೆಂಚರು

ಡಿ) ಪೋರ್ಚುಗೀಸರು

3. ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು ಬ್ರಿಟಿಷರಿಗೆ ಪ್ರತಿಷ್ಠೆಯನ್ನು ನೀಡಿದ ಯುದ್ಧ:

ಎ) ಮೊದಲ ಕಾರ್ನಾಟಿಕ್ ಯುದ್ಧ

ಬಿ) ಎರಡನೆಯ ಕಾರ್ನಾಟಿಕ್ ಯುದ್ಧ

ಸಿ) ಮೂರನೆಯ ಕಾರ್ನಾಟಿಕ್ ಯುದ್ಧ

ಡಿ) ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ ಯುದ್ಧ

4. ಸಲಾಬತ್‌ಜಂಗನ ರಕ್ಷಣೆಗಾಗಿ ನೇಮಕಗೊಂಡ ಫ್ರೆಂಚ್ ಅಧಿಕಾರಿ:

ಎ) ಬುಸ್ಸಿ

ಬಿ) ಡೂಪ್ಲೆ

ಸಿ) ಲಾಬೋರ್ಡಿನಾ

ಡಿ) ಕೌಂಟ್ ಡಿ ಲಾಲಿ

5. ಯುರೋಪಿಯನ್ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿ ಸಿದ್ದವರು:

ಎ) ಇಟಲಿಯ ವರ್ತಕರು

ಬಿ) ಅರಬ್ಬರು

ಸಿ) ಫ್ರೆಂಚರು

ಡಿ) ಪೋರ್ಚುಗೀಸರು

6. ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಿದ ಫ್ರೆಂಚ್ ಅಧಿಕಾರಿ:

ಎ) ಬುಸ್ಸಿ

ಬಿ) ಲಾಬೋರ್ಡಾನಾಯಿಸ್

ಸಿ) ಕೌಂಟ್ ಡಿ ಲಾಲಿ

ಡಿ) ಡೂಪ್ಲೆ

7. ಬಕ್ಸಾರ್ ಕದನದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವ ವಹಿಸಿದ್ದವನು:

ಎ) ರಾಬರ್ಟ್ ಡ್ರೈವ್

ಬಿ) ಒಂದನೆಯ ಜೇಮ್ಸ್

ಸಿ) ಹೆಕ್ಟರ್ ಮನ್ನೋ

ಡಿ) ಎರಡನೇ ಚಾರ್ಲ್ಸ್

8. ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ದಸ್ತಕಗಳನ್ನು ನೀಡಿದ ಮೊಗಲ್ ದೊರೆ:

ಎ) ಫಾರೂಕ್ ಶಿಯಾರ

ಬಿ) ಮುರ್ಷಿಕ್ ಅಲಿ ಖಾನ್

ಸಿ) ಅಲಿವರ್ದಿಖಾನ್

ಡಿ) ಜಹಾಂಗೀರ್

9. ಭಾರತದಲ್ಲಿ ಬ್ರಿಟಿಷರು ತಮ್ಮ ಮೊದಲ ಫ್ಯಾಕ್ಟರಿಯನ್ನು ಆರಂಭಿಸಿದ್ದು:

ಎ) ಆಗ್ರಾ

ಬಿ) ಸೂರತ್

ಸಿ) ಅಹಮದಾಬಾದ್

ಡಿ) ಬೋಚ್

  1. 2ನೇ ಕಾರ್ನಾಟಿಕ್ ಯುದ್ಧಮುಕ್ತಾಯಗೊಳಿಸಿದ ಒಪ್ಪಂದ ಪಾಂಡಿಚೇರಿ.
  2. ಬಂಗಾಳದ ಹೂಗ್ಲಿ ನದಿ ದಂಡೆಯ ಮೇಲೆ ಕಟ್ಟಿದ ಕೋಟೆ ಫೋರ್ಟ್‌ ವಿಲಿಯಂ.
  3. ಮಾರ್ತಾಂಡ ವರ್ಮನ ಆಳ್ವಿಕೆಯಲ್ಲಿ ಕೊಚ್ಚಿ ವಿಶ್ವದ ಪ್ರಮುಖ ಸಾಂಬಾರ ಪದಾರ್ಥಗಳ ಕೇಂದ್ರವಾಗಿ ಗುರುತಿಸಲ್ಪಟ್ಟಿತು.
  4. ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‌ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು ಸರ್. ಥಾಮಸ್‌ರೋ.
  5. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಆಲ್ಲೋನ್ಸೆ ಡಿ ಆಲ್ಬುಕರ್ಕ್.
  6. ವಾಸ್ಕೋಡಗಾಮ ಕಲ್ಲಿಕೋಟೆಯನ್ನು ತಲುಪಿದ ವರ್ಷ ಸಾ.ಶ. 1498 .
  7. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು ಅರಬ್ಬರು.

IV. ಹೊಂದಿಸಿ ಬರೆಯಿರಿ:

ಉತ್ತರಗಳು
ಬಕ್ಸಾರ್ ಕದನ16641600
ಈಸ್ಟ್ ಇಂಡಿಯಾ ಕಂಪನಿ17601602
ವಾಂಡಿವಾಷ್ ಕದನ17641664
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ16021757
ಪ್ಲಾಸಿ ಕದನ16001760
ಡಚ್ ಈಸ್ಟ್ ಇಂಡಿಯಾ ಕಂಪನಿ17571764

ಮುಖ್ಯಾಂಶಗಳು:

  • ಭಾರತ ಮತ್ತು ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು.
  • ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ಜೀರಿಗೆ, ದಾಲ್ಟಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು.
  • ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್‌ ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು.
  • ಕಾನ್‌ಸ್ಟಾಂಟಿನೋಪಲ್ ಅಂತಾರಾಷ್ಟ್ರೀಯ ಸರಕು ವಿನಮಯ ಕೇಂದ್ರವಾಗುವ ಮೂಲಕ ಯೂರೋಪಿನ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟಿತು.
  • ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಅರಬ್ಬರು, ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇಟಲಿಯ ವರ್ತಕರು ಏಕಸ್ವಾಮ್ಯ ಸಾಧಿಸಿದ್ದರು.
  • ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು.
  • ಸಾ.ಶ. 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ಎಂಬಲ್ಲಿಗೆ ಬಂದು ತಲುಪಿದ ಪೋರ್ಚ್ಗಲ್ ನಾವಿಕ ವಾಸ್ಕೋಡಗಾಮ ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದ.
  • ಪೋರ್ಚುಗೀಸರ ಯಶಸ್ವಿ ಪ್ರಯತ್ನಗಳಿಂದ ಪ್ರೇರಣೆಗೊಂಡ ಯುರೋಪಿನ ಡಚ್, ಇಂಗ್ಲಿಷ್ ಮತ್ತು ಫ್ರೆಂಚರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು.
  • ಸಾ.ಶ. 1729 ರಿಂದ ಸಾ.ಶ. 1758 ರವರೆಗೆ ವೈನಾಡ್ ಸಂಸ್ಥಾನವನ್ನು ಆಳಿದ ಮಾರ್ತಾಂಡವರ್ಮನು ತನ್ನ ಸುತ್ತಮುತ್ತಲಿನ ಸಂಸ್ಥಾನಗಳು ಮತ್ತು ಪರಕೀಯ ಡಚ್ಚರಿಂದ ತನ್ನ ಸಂಸ್ಥಾನವನ್ನು ರಕ್ಷಿಸಿದ.
  • ಮಾರ್ತಾಂಡವರ್ಮನ ಆಳ್ವಿಕೆಯ ಕಾಲದಲ್ಲಿ ಕೊಚ್ಚಿ ವಿಶ್ವದ ಪ್ರಮುಖ ಸಾಂಬಾರ ಪದಾರ್ಥಗಳ ಕೇಂದ್ರವಾಗಿ ಗುರುತಿಸಲ್ಪಟ್ಟಿತು.
  • ಭಾರತದಲ್ಲಿ ಇಂಗ್ಲಿಷರ ಏಳಿಗೆ ಮತ್ತು ಡಚ್ಚರು ಆನ್ನೇಯ ಏಷ್ಯಾದಲ್ಲಿ ವಶಪಡಿಸಿಕೊಂಡ ದ್ವೀಪಗಳಲ್ಲಿ ಹೆಚ್ಚು ಆಸಕ್ತರಾಗಿದ್ದುದು ಭಾರತದಲ್ಲಿ ಡಚ್ಚರ ಅಧಿಕಾರದ ಅವನತಿಗೆ ಕಾರಣವಾದವು.
  • ಪೋರ್ಚುಗೀಸರು ಮತ್ತು ಡಚ್ಚರು 18ನೆಯ ಶತಮಾನದ ಮಧ್ಯಂತರದ ಹೊತ್ತಿಗೆ ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿದರು.
  • ಭಾರತದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳಲು ಶಕ್ತಿ ಪ್ರದರ್ಶನಕ್ಕೆ ಮುಂದಾದ ಬ್ರಿಟಿಷರು ಮತ್ತು ಫ್ರೆಂಚರು ಹೈದರಾಬಾದ್ ಸಂಸ್ಥಾನ ಮತ್ತು ಕರ್ನಾಟಿಕ್ ಪ್ರಾಂತ್ಯದಲ್ಲಿನ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಯತ್ನಿಸಿದುದರ ಪರಿಣಾಮವಾಗಿ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು.
  • ಮೊದಲ ಕಾರ್ನಾಟಿಕ್ ಯುದ್ಧವು (ಸಾ.ಶ. 1746-1748) ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ ಏಕ್ಸ್-ಲಾ-ಚಾಪೆಲ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
  • ಎರಡನೆಯ ಕಾರ್ನಾಟಿಕ್ ಯುದ್ಧವು (ಸಾ.ಶ. 1749-1754) ಪಾಂಡಿಚೇರಿ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
  • ಮೂರನೆಯ ಕಾರ್ನಾಟಿಕ್ ಯುದ್ಧವು (ಸಾ.ಶ. 1756-1763) ಪ್ಯಾರಿಸ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
  • ದಕ್ಷಿಣ ಭಾರತದಲ್ಲಿ ರಾಜಕೀಯ ನಿಯಂತ್ರಣ ಸಾಧಿಸಿದ ಬ್ರಿಟಿಷರು ಸಂಪದ್ಭರಿತ ಬಂಗಾಳ ಪ್ರಾಂತ್ಯದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಮುಂದಾಗಿದ್ದರ ಪರಿಣಾಮವಾಗಿ ಭಾರತದ ಇತಿಹಾಸಕ್ಕೆ ಮಹತ್ವಪೂರ್ಣವಾದ ತಿರುವನ್ನು ಕೊಟ್ಟ ಪ್ಲಾಸಿ ಮತ್ತು ಬಕ್ಸಾರ್ ಕದನಗಳು ನಡೆದವು.
  • ಮೂರು ಕಾರ್ನಾಟಿಕ್ ಯುದ್ಧಗಳು, ಪ್ಲಾಸಿ ಮತ್ತು ಬಕ್ಸಾರ್ ಕದನಗಳ ಪರಿಣಾಮವಾಗಿ ಬ್ರಿಟಿಷರು ಭಾರತದಲ್ಲಿ ರಾಜಕೀಯ ಪರಮಾಧಿಕಾರವನ್ನು ಸ್ಥಾಪಿಸಿದರು.

10ನೇ ತರಗತಿ ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ‌ ಸಮಾಜ ನೋಟ್ಸ್

10ನೇ ತರಗತಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಸಮಾಜ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್

Leave a Reply

Your email address will not be published. Required fields are marked *